ಚಿನ್ನೇಗೌಡರಿಗೆ ಸಾರಾ ಗೋವಿಂದರಿಂದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧಿಕಾರ ಹಸ್ತಾಂತರ

Public TV
1 Min Read

ಬೆಂಗಳೂರು: ಮಂಗಳವಾರ ನಡೆದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಎಸ್.ಎ.ಚಿನ್ನೇಗೌಡರಿಗೆ ಮಾಜಿ ಅಧ್ಯಕ್ಷ ರಾ ಗೋವಿಂದ್‍ರವರು ಅಧಿಕಾರ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಸಾ ರಾ ಗೋವಿಂದ್, ವಾಣಿಜ್ಯ ಮಂಡಳಿಯ ನೂತನ ಸದಸ್ಯರಲ್ಲಿ ಮನವಿ ಮಾಡಿಕೊಂಡು ನೀವು ಯಾವುದೇ ಸಾಧನೆ ಮಾಡದೇ ಇದ್ದರೂ ಪರವಾಗಿಲ್ಲ, ಆದರೆ ವಾಣಿಜ್ಯ ಮಂಡಳಿಗೆ ಧಕ್ಕೆ ತರುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.

ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರಾಗಿ ಕರಿಸುಬ್ಬು, ವಿತರಕರ ವಲಯದಿಂದ ಕೆ. ಮಂಜು, ಗೌರವ ಕಾರ್ಯದರ್ಶಿ ಭಾ ಮಾ ಹರೀಶ್ ಹಾಗೂ ಖಜಾಂಚಿಯಾಗಿ ಕೆ.ಎಂ.ವೀರೇಶ್ ಆಯ್ಕೆಯಾಗಿದ್ದಾರೆ. ಎಸ್ ಎ ಚಿನ್ನೆಗೌಡರು ರಾಜ್ ಕುಟುಂಬದ ಸದಸ್ಯರಾಗಿದ್ದು, ಪಾರ್ವತಮ್ಮ ರಾಜ್ ಕುಮಾರ್‍ರವರ ಸಹೋದರಾಗಿದ್ದಾರೆ. ಅಲ್ಲದೇ ಶ್ರೀಮುರುಳಿ ಹಾಗೂ ವಿಜಯರಾಘವೇಂದ್ರರವರ ತಂದೆಯಾಗಿದ್ದಾರೆ.

ಅಧ್ಯಕ್ಷರಾದ ಸಾ ರಾ ಗೋವಿಂದ್‍ರವರ ಅಧಿಕಾರ ಅವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಚುನಾವಣೆ ನಡೆದಿತ್ತು. ಕಳೆದ ಮೂರು ವರ್ಷಗಳ ನಂತರ ಚುನಾವಣೆ ನಡೆದಿತ್ತು, ಈ ಬಾರಿ ಅಧ್ಯಕ್ಷ ಸ್ಥಾನವನ್ನು ವಿತರಣಾ ವಲಯಕ್ಕೆ ಮೀಸಲಿಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ವಿತರಕರ ವಲಯದಿಂದ ಚಿನ್ನೆಗೌಡ್ರು ಮತ್ತು ಮಾರ್ಸ್ ಸುರೇಶ್ ಸ್ಫರ್ದಿಸಿದ್ದು, ಇವರಿಬ್ಬರ ನಡುವೆ ತೀವ್ರ ಪೈಪೊಟಿ ಕಂಡುಬಂದಿತ್ತು. ವಿವಿಧ ಕ್ಷೇತ್ರಗಳಿಂದ ಒಟ್ಟು 1,500 ಮತದಾರರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೊಂದಿದೆ. ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ!

Share This Article
Leave a Comment

Leave a Reply

Your email address will not be published. Required fields are marked *