ಎಲ್ಲಿದೆಯಮ್ಮಾ ಕೋವಿಡ್? ಅದರ ಹೆಸರಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡ್ತಿಲ್ಲ: ಹಾಲಪ್ಪ ಆಚಾರ್

Public TV
1 Min Read

ರಾಮನಗರ: ಕೋವಿಡ್ ಎಂಬುವುದೇ ಇಲ್ಲ. ಎಲ್ಲಿದೆ ಕೋವಿಡ್? ಕೋವಿಡ್ ಹೆಸರಿನಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿಲ್ಲ. ಈ ಬಗ್ಗೆ ನೀವು ಪೊಷಕರಿಗೆ ತಿಳಿಸಿ ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳಬೇಕು ಎಂದು ಸಚಿವ ಹಾಲಪ್ಪ ಆಚಾರ್ ಅಂಗನಾಡಿ ಮುಖ್ಯ ಶಿಕ್ಷಕರಿಗೆ ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಗ್ರಾಮದ ಅಂಗನವಾಡಿಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಗೆ ಬಂದಿದ್ದ ಹಾಲಪ್ಪ ಹೆಚ್ಚಿನ ಮಕ್ಕಳು ಗೈರಾಗಿರುವುದನ್ನು ಕಂಡು ಶಿಕ್ಷಕಿಗೆ ಮಕ್ಕಳು ಏಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾರೆ. ಕೋವಿಡ್ ಭೀತಿಗೆ ಹೆಚ್ಚಿನ ಮಕ್ಕಳು ಬಂದಿಲ್ಲ ಎಂದು ಅಂಗನವಾಡಿಯ ಮುಖ್ಯ ಶಿಕ್ಷಕಿ ಹಾಲಪ್ಪ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಧರಿಸುವುದು ಮೂಲಭೂತ ಹಕ್ಕು: ಸಿದ್ದರಾಮಯ್ಯ

ಈ ಸಂದರ್ಭದಲ್ಲಿ ಸಚಿವ ಹಾಲಪ್ಪ ಎಲ್ಲಿದೆಯಮ್ಮಾ ಕೋವಿಡ್? 22 ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳುವುದು ಕಷ್ಟನಾ? ಇದರ ಬಗ್ಗೆ ನೀವು ಪೋಷಕರಿಗೆ ತಿಳಿಸಿ ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಮವಸ್ತ್ರದ ಆದೇಶ ಪಾಲಿಸದಿದ್ದರೆ ಕಾಲೇಜಿನಿಂದಲೇ ಡಿಬಾರ್

Share This Article
Leave a Comment

Leave a Reply

Your email address will not be published. Required fields are marked *