ಮದ್ವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಳಾಗಿಲ್ಲವೆಂದು ಆಶ್ರಮದಿಂದ ಮಗುವನ್ನು ಕದ್ದ

Public TV
1 Min Read

ಚಂಡೀಗಢ್: ಮದುವೆಯಾಗಿ ಎರಡೂವರೆ ವರ್ಷವಾದರೂ ಮಕ್ಕಳಾಗಿಲ್ಲ ಎಂದು ವ್ಯಕ್ತಿಯೊಬ್ಬ ಆಶ್ರಮದಿಂದ ಮಗುವನ್ನು ಕದ್ದು ಅರೆಸ್ಟ್ ಆದ ಘಟನೆ ಹರಿಯಾಣದ ಕೈತಲ್ ಜಿಲ್ಲೆಯಲ್ಲಿ ನಡೆದಿದೆ.

ವಿಕಾಸ್ ಮಗುವನ್ನು ಕದ್ದು ಅರೆಸ್ಟ್ ಆದ ವ್ಯಕ್ತಿ. ಮದುವೆಯಾಗಿ ಎರಡೂವರೆ ವರ್ಷವಾದರೂ ದಂಪತಿಗೆ ಮಕ್ಕಳಾಗಿಲ್ಲ. ಈ ಕಾರಣಕ್ಕಾಗಿ ಪತಿ-ಪತ್ನಿ ಇಬ್ಬರು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಆದರೆ ಮಗುವನ್ನು ದತ್ತು ಪಡೆಯುವುದಕ್ಕೆ ತುಂಬಾ ದೊಡ್ಡ ಪ್ರಕ್ರಿಯೆಗಳಿದ್ದ ಕಾರಣ ವಿಕಾಸ್ ಆಶ್ರಮದಿಂದ ಮಗುವನ್ನು ಕದ್ದಿದ್ದನು.

ಆಶ್ರಮದಿಂದ ವಿಕಾಸ್ ಮಗುವನ್ನು ಕದ್ದ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾಧ್ಯಮಗಳಲ್ಲಿ ಪ್ರಸಾರವಾಗುವುದಕ್ಕೆ ಶುರುವಾಯಿತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ವಿಕಾಸ್ ಪೊಲೀಸ್ ಠಾಣೆಗೆ ಹೋಗಿ ಮಗುವನ್ನು ಹಿಂದಿರುಗಿಸಿದ್ದನು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಪಿ ವಿರೇಂದ್ರ ಅವರು, ಮದುವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಕಳಾಗದ ಕಾರಣ ಪತಿ-ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಅಲ್ಲದೆ ಇಬ್ಬರು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಮಗುವನ್ನು ದತ್ತು ಪಡೆಯುವುದಕ್ಕೆ ತುಂಬಾ ದೊಡ್ಡ ಪ್ರಕ್ರಿಯೆಗಳಿದ್ದ ಕಾರಣ ವಿಕಾಸ್ ಆಶ್ರಮದಿಂದ ಮಗುವನ್ನು ಕದ್ದಿದ್ದಾನೆ ಎಂದರು.

ಮಾಧ್ಯಮದಲ್ಲಿ ಈ ಸುದ್ದಿ ಪ್ರಸಾರವಾಗಿದ್ದಕ್ಕೆ ವಿಕಾಸ್ ತನ್ನ ಮನಸ್ಸು ಬದಲಾಯಿಸಿ ಮಗುವನ್ನು ನಮ್ಮ ಬಳಿ ಬಿಟ್ಟು ಹೋಗಿದ್ದಾನೆ ಎಂದು ಎಸ್‍ಪಿ ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಶನಿವಾರ ಆಶ್ರಮದಿಂದ ಕಾಣೆಯಾದ ಮಗುವನ್ನು ಕೇವಲ 18 ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಬಳಿ ಕರೆಸಿಕೊಂಡಿದ್ದೆವೆ. ಸದ್ಯ ನಾವು ವಿಕಾಸ್‍ನನ್ನು ವಿಚಾರಣೆ ನಡೆಸುತ್ತಿದ್ದೆವೆ ಎಂದು ಎಸ್‍ಪಿ ವಿರೇಂದ್ರ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *