ಕುದುರೆ ರೇಸ್‍ನಲ್ಲಿ ಸರಣಿ ಅಪಘಾತ

Public TV
1 Min Read

ಚಿಕ್ಕೋಡಿ (ಬೆಳಗಾವಿ): ವಾಹನಗಳ ಮಧ್ಯೆ ಸರಣಿ ಅಪಘಾತವಾಗುವುದು ಕಾಮನ್. ಆದರೆ ಕುದುರೆಗಳ ಷರತ್ತಿನ ಸ್ಪರ್ಧೆಯ ವೇಳೆ ಕುದುರೆ ಗಾಡಿಗಳ ಸರಣಿ ಅಪಘಾತವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ.

ಸಂಕೇಶ್ವರ ಪಟ್ಟಣದ ಶಂಕರಲಿಂಗ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಜೋಡಿ ಕುದುರೆಯ ಶರತ್ತಿನ ವೇಳೆ ಕುದುರೆ ಗಾಡಿಗಳು ಅಪಘಾತಕ್ಕಿಡಾಗಿವೆ. ಸಂಕೇಶ್ವರ ಬಸ್ ನಿಲ್ದಾಣದಿಂದ ನೀಡಸೊಸಿ ಗ್ರಾಮದವರೆಗೆ ಕುದುರೆ ಗಾಡಿ ಷರತ್ತು ಬಿಡಲಾಗಿತ್ತು.

ಈ ವೇಳೆ ಓಡುತ್ತಿದ್ದ ಕುದುರೆ ಕಾಲು ಜಾರಿ ಕೆಳಗೆ ಬಿದ್ದಿದೆ. ನಂತರ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕುದುರೆ ಗಾಡಿ ಬಂದು ಬಿದ್ದಿರುವ ಕುದುರೆ ಗಾಡಿಗೆ ಡಿಕ್ಕಿ ಹೊಡೆದಿದೆ. ನಂತರ ಇದಕ್ಕೆ ಮತ್ತೊಂದು ಗಾಡಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಸಂಭವಿಸಿದರೂ ಕುದುರೆ ರೇಸ್‍ನ ಮಧ್ಯದಲ್ಲೇ ಬಿಡದೆ ಮತ್ತೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಅದೃಷ್ಟವಶ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *