ಚುನಾವಣಾ ಅಖಾಡಕ್ಕಿಳಿಯಲು ಚಿಕ್ಕರಾಯಪ್ಪ ಪ್ಲಾನ್ – ಸಿಎಂ ಮಾತ್ರ ಹೀಗಂದ್ರು

Public TV
1 Min Read

ಬೆಂಗಳೂರು: 500 ಮತ್ತು 1 ಸಾವಿರ ರೂ. ನೋಟು ನಿಷೇಧದ ಬಳಿಕ ಐಟಿ ದಾಳಿಗೆ ಒಳಗಾಗಿದ್ದ ಸಿಎಂ ಆಪ್ತ ಚಿಕ್ಕರಾಯಪ್ಪ ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸಲು ಪ್ಲಾನ್ ಮಾಡಿದ್ದಾರೆ.

ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಚಿಕ್ಕರಾಯಪ್ಪ ಇಚ್ಛಿಸಿದ್ದರು ಎನ್ನಲಾಗುತ್ತಿದ್ದು, ಈ ಸಂಬಂಧ ಮಂಗಳವಾರ ಸಂಜೆ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ಈ ವೇಳೆ ಚಿಕ್ಕರಾಯಪ್ಪ ತಾವು ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಸಿಎಂ ಮುಂದೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಹಾಗಾದ್ರೆ ಸಿಎಂ ಹೇಳಿದ್ದೇನು?: ನಿನ್ನ ವಿರುದ್ಧ ಎಸಿಬಿ, ಇಡಿ ವಿಚಾರಣೆ ಬಾಕಿ ಇದೆ. ಹೀಗಿರುವಾಗ ಯಾರು ನಿನ್ನ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ? ರಾಜಕೀಯಕ್ಕೆ ಬರಲು ನಿಮಗೆ ಐಡಿಯಾ ಕೊಟ್ಟವರಾರು? ರಾಜಕೀಯ ಅಂದ್ರೆ ಒಂದು ಕಪ್ ಟೀ ಕುಡಿದಂತಲ್ಲ ಅಂತಾ ಸಿಎಂ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಕಚೇರಿಗೆ ಹೋಗಿ ಕೆಲಸ ಮಾಡು, ವಿಚಾರಣೆ ಎದುರಿಸಿ, ಆರೋಪ ಮುಕ್ತ ಆಗೋದು ಹೇಗೆ ಎಂಬುದರ ಬಗ್ಗೆ ಗಮನಹರಿಸು ಅದು ಬಿಟ್ಟು ರಾಜಕೀಯದತ್ತ ಬರಬೇಡ ಅಂತಾ ಸಿಎಂ ಗುಡುಗಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *