ಕಾಫಿನಾಡಿನ ಸಿರಿ ಕನ್ಯೆ ಮುಂದೆ ಸಿದ್ದರಾಮಯ್ಯ ಫೋಟೋ ಶೂಟ್

Public TV
1 Min Read

ಚಿಕ್ಕಮಗಳೂರು: ಕಾಫಿನಾಡಿನ ಸಿರಿ ಕನ್ಯೆ, ಚಿಕ್ಕಮಗಳ ಮನೆ ಎಂದೆಲ್ಲಾ ಕರೆಸಿಕೊಳ್ಳೊ ರೆಸಾರ್ಟ್ ಮುಂದಿರುವ ಪ್ರತಿಮೆ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಫೋಟೋ ಶೂಟ್ ನಡೆಸಿದ್ದಾರೆ.

ತರೀಕೆರೆ ತಾಲೂಕಿನ ಚಿಕ್ಕೆರೆ ಸಮೀಪದ ಜಾಮೀಯ ಮಸೀದಿಯಲ್ಲಿ ಗುರುವಾರ ನಡೆದ ಧಾರ್ಮಿಕ ಸೌಹಾರ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಬಳಿಕ ಚಿಕ್ಕಮಗಳೂರಿನಿಂದ ಐದು ಕಿ.ಮೀ. ದೂರದಲ್ಲಿರುವ ಸಿರಿ ಕಾಫಿಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಬೆಳಗ್ಗೆ ವಾಕ್ ಮಾಡುವಾಗ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ರೆಸಾರ್ಟಿನಲ್ಲಿ ವಾಕ್ ಮಾಡುವಾಗ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರೆಸಾರ್ಟಿನಲ್ಲಿ ತಂಗಿದ್ದ ಕೆಲವರು ಹಾಗೂ ಸ್ಥಳೀಯರು ಕೂಡ ಸಿದ್ದರಾಮಯ್ಯ ಅವರ ಫೋಟೋವನ್ನ ಕ್ಲಿಕ್ಕಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಕೂಡ ಕೇಳಿದವರಿಗೆಲ್ಲಾ ಫೋಟೋಗೆ ಫೋಸ್ ಕೊಟ್ಟಿದ್ದಾರೆ.

ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ ವಾಕ್ ಮಾಡುವಾಗಲೂ ಜನ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ದುಂಬಾಲು ಬಿದ್ದಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಒಂದಿಷ್ಟೂ ಗದರದೆ, ಟೈಂ ಆಗುತ್ತೆ ಕಣ್ರಪ್ಪಾ, ಪ್ರೆಸ್ ಮೀಟ್ ಮಾಡಿ ಹಾಸನ ಹೋಗಬೇಕು ಎಂದು ಯಾರಿಗೂ ನಿರಾಸೆ ಮಾಡದೆ ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *