20 ಜನರ ಮಧ್ಯೆ ಮುಗೀತು ಮದ್ವೆ – ಕಾಫಿನಾಡಲ್ಲಿ ಸರಳ ವಿವಾಹ

Public TV
1 Min Read

ಚಿಕ್ಕಮಗಳೂರು: ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದೆ. ಈ ಮಧ್ಯೆ ಅತೀ ಸರಳ ವಿವಾಹವೊಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜರುಗಿದೆ.

ಗಂಡು-ಹೆಣ್ಣು ಬಿಟ್ಟು 18 ಜನ, ಒಟ್ಟು 20 ಜನರ ಮಧ್ಯೆ ಮದುವೆಯೊಂದು ಮುಗಿದಿದೆ. ಜಿಲ್ಲೆಯ ಕೊಪ್ಪ ತಾಲೂಕಿನ ಕೂಳೂರು ನಿವಾಸಿಯಾದ ಶ್ರೀನಿಧಿಯವರೊಂದಿಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮಿಲನ ಅವರ ಮದುವೆ ನಿಶ್ಚಯವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಂದು ತೀರ್ಥಹಳ್ಳಿಯ ಮಾಧವ ಮಾಂಗಲ್ಯ ಸಭಾಭವನದಲ್ಲಿ ಮದುವೆ ನಡಯಬೇಕಿತ್ತು.

ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ವರನ ಊರು ಕೂಳೂರಿನಲ್ಲಿ ಕೇವಲ 20 ಸೇರಿ ಹುಡುಗನ ಮನೆಯಲ್ಲೇ ಮದುವೆ ಮಾಡಿ ಮುಗಿಸಿದ್ದಾರೆ. ಮದುವೆಯಲ್ಲಿ ವಧು-ವರ, ಇಬ್ಬರ ಹೆತ್ತವರು ಹಾಗೂ ಸಹೋದರರಷ್ಟೆ ಭಾಗಿಯಾಗಿದ್ದರು. ಸ್ನೇಹಿತರು ಹಾಗೂ ದೂರದ ಸಂಬಂಧಿಗಳನ್ನೂ ಕೂಡ ಮದುವೆಗೆ ಆಹ್ವಾನಿಸಿದೆ ಅತೀ ಸರಳ ವಿವಾಹ ಮಾಡಿ ಕೊರೊನಾ ಲಾಕ್‍ಡೌನ್‍ಗೆ ಬೆಂಬಲ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *