ಮಲೆನಾಡಿಯಲ್ಲಿ ಮಳೆ- ಬಯಲುಸೀಮೆ ಕೊಳವೆ ಬಾವಿಯಲ್ಲಿ ಉಕ್ಕಿ ಹರಿಯುತ್ತಿದೆ ನೀರು

Public TV
1 Min Read

ಚಿಕ್ಕಮಗಳೂರು: ಮಲೆನಾಡಿನಲ್ಲಿ ಸುರಿದ ಭಾರೀ ಮಳೆಗೆ ಬಯಲುಸೀಮೆಯ ಕೊಳವೆ ಬಾವಿಯೊಂದು ಉಕ್ಕಿ ಹರಿಯುತ್ತಿರುವ ಪ್ರಕೃತಿಯ ವೈಚಿತ್ರ್ಯಕ್ಕೆ ಕಾಫಿನಾಡು ಸಾಕ್ಷಿಯಾಗಿದೆ.

ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದ ರಮೇಶ್ ಅವರ ತೋಟದ ಕೊಳವೆ ಬಾವಿಯಲ್ಲಿ ಮೋಟರ್ ಆನ್ ಮಾಡದಿದ್ದರೂ ನೀರು ಚಿಮ್ಮುತ್ತಿದೆ. ಇದನ್ನು ನೋಡಲು ಗ್ರಾಮಸ್ಥರು ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. ಕೊಳವೆ ಬಾವಿಯಿಂದ ನೀರು ಉಕ್ಕುತ್ತಿರುವುದನ್ನು ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮಲೆನಾಡಿಗೆ ಹೋಲಿಸಿದರೆ ಬಯಲುಸೀಮೆಯಲ್ಲಿ ಮಳೆ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಕಡೂರು ತಾಲೂಕು 2 ದಶಕಗಳಿಂದ ಶಾಶ್ವತ ಬರಗಾಲಕ್ಕೆ ತುತ್ತಾಗಿತ್ತು. ಆದರೆ ಈ ಬಾರಿ ಸುರಿದ ಕಡಿಮೆ ಪ್ರಮಾಣದ ಮಳೆಗೆ ಕೊಳವೆ ಬಾವಿ ತುಂಬಿ ಹರಿಯುತ್ತಿರುವುದನ್ನು ಜನರು ಕುತೂಹಲದಿಂದ ವೀಕ್ಷಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಮ್ಮೆದೊಡ್ಡಿ ಗ್ರಾಮಸ್ಥರೊಬ್ಬರು, ಮಲೆನಾಡಿಯಲ್ಲಿ ಆಕಾಶದಿಂದ ಮಳೆಯಾದರೆ, ಬಯಲುಸೀಮೆಯಲ್ಲಿ ಭೂಮಿಯಿಂದ ಜಲ ಉಕ್ಕುತ್ತಿದೆ. ಇಂತಹ ಪ್ರಕೃತಿ ವೈಚಿತ್ರ್ಯಕ್ಕೆ ಕಾಫಿನಾಡು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *