ವಿದೇಶದಿಂದ ಮಾಲೀಕನ ಕಂಡು ಮನೆಗೆ ಬೀಗ ಹಾಕ್ಕೊಂಡೋದ ಬಾಡಿಗೆದಾರ

Public TV
1 Min Read

ಚಿಕ್ಕಮಗಳೂರು: ವಿದೇಶದಲ್ಲಿ ಇದ್ದಾರೆ ಅಂದ್ರೆ ಹೆಮ್ಮೆ ಪಡುವ ಕಾಲವೊಂದಿತ್ತು. ಆದರೆ ಈಗ ಫಾರಿನ್, ಅಬ್ರಾಡು ಅಂದ್ರೆ ಭಯದಿಂದ ಊರು ಬೀಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಫಿನಾಡಲ್ಲೂ ಅಂತಹದ್ದೊಂದು ಹಾಸ್ಯ ಪ್ರಸಂಗ ನಡೆದಿದೆ.

ವಿದೇಶದಿಂದ ಚಿಕ್ಕಮಗಳೂರಿಗೆ ವಾಪಸ್ಸಾದವರನ್ನ ಕಂಡು ಬಾಡಿಗೆದಾರ ಮನೆಗೆ ಬೀಗ ಹಾಕಿಕೊಂಡು ಮನೆ ಬಿಟ್ಟು ಹೋಗಿರೋ ಘಟನೆ ನಗರದಲ್ಲಿ ನಡೆದಿದೆ.

ನಗರದ ಬೈಪಾಸ್ ರಸ್ತೆಯಲ್ಲಿ ಜಿಲ್ಲೆಯ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದೋರು ಬಾಡಿಗೆ ಮನೆಯಲ್ಲಿ ವಾಸವಿದ್ರು. ದುಬೈಗೆ ಹೋಗಿದ್ದ ಮನೆ ಮಾಲೀಕ ಇತ್ತೀಚೆಗೆ ಚಿಕ್ಕಮಗಳೂರಿಗೆ ವಾಪಸ್ಸಾಗಿದ್ದರು. ವಿದೇಶಕ್ಕೆ ಹೋಗಿದ್ದ ಮನೆ ಮಾಲೀಕ ವಾಪಸ್ ಬಂದು, “ಏನ್ರಿ ಮೇಷ್ಟ್ರೇ ಏನ್ ಸಾಮಾಚಾರ, ಬಾಡಿಗೆ ಕೊಡ್ತೀರಾ ಎಂದು ಕೇಳಿದ್ದಾರೆ ಅಷ್ಟೆ”. ಮನೆಯಲ್ಲಿ ಬಾಡಿಗೆ ಇದ್ದ ಮೇಷ್ಟ್ರು ಕೊರೊನಾ ಆತಂಕದಿಂದ ಬಾಡಿಗೆಯನ್ನೂ ನೀಡದೆ, ಮಾಲೀಕರಿಗೂ ಹೇಳದೆ, ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸಿಲ್ಲ. ಹಾಗಾಗಿ ಕಾಫಿನಾಡಿನ ಜನ ವಿದೇಶದಿಂದ ಬಂದವರು ಅಂದ್ರೆ ಮಾತನಾಡೋದಕ್ಕಿರಲಿ, ನೋಡೋದಕ್ಕೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *