ಸಿದ್ದರಾಮಣ್ಣನನ್ನ ನೋಡಿದ್ರೆ ನನಗೆ ಅಯ್ಯೋ ಪಾಪ ಅನಿಸುತ್ತೆ: ನೂತನ ಸಚಿವ ಸುಧಾಕರ್

Public TV
1 Min Read

ಚಿಕ್ಕಬಳ್ಳಾಪುರ: ನಾವು ಸಿದ್ದರಾಮಯ್ಯ ಜೊತೆ ಇರುವಾಗ ಸಿದ್ದರಾಮಯ್ಯರನ್ನು ಸೇಫ್ ಗಾರ್ಡ್ ಮಾಡ್ತಿದ್ದೇವು. ಆದರೆ ಈಗ ಸಿದ್ದರಾಮಣ್ಣನ ಸ್ಥಿತಿ ನೋಡಿ ಅಯ್ಯೋ ಅನಿಸ್ತಿದೆ ಎಂದು ನೂತನ ಸಚಿವ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಇಂದು ನಗರದ ಚಾಮರಾಜಪೇಟೆಗೆ ಭೇಟಿ ನೀಡಿದ್ದ ನೂತನ ಸಚಿವರು ಡಾ.ಬಿ.ಆರ್.ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದರು. ಸಿದ್ದರಾಮಯ್ಯ ಚೆನ್ನಾಗಿ ಕಾನೂನು ಬಲ್ಲವರು. ಸುಪ್ರೀಂಕೋರ್ಟ್ ತೀರ್ಪನ್ನೇ ಪ್ರಶ್ನೆ ಮಾಡುತ್ತಾರೆ. ಅವರಿಗೆ ಸಂವಿಧಾನ, ನ್ಯಾಯಾಂಗದ ಮೇಲೆ ನಂಬಿಕೆ ಇದೆಯಾ ಎಂದು ಮೊದಲು ಸ್ಪಷ್ಟಪಡಿಸಲಿ ಎಂದರು.

ಸಿದ್ದರಾಮಯ್ಯ ಸ್ಥಿತಿ ಈಗ ಏನಾಗಿದೆ ಎಂದು ಇಡೀ ರಾಜ್ಯವೇ ನೋಡ್ತಿದೆ. ಯಾರು ಹಿತವರು, ಯಾರು ಶತ್ರುಗಳು ಅನ್ನೊದನ್ನ ಸಿದ್ದರಾಮಯ್ಯ ಈಗಲಾದ್ರೂ ಆತ್ಮವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದರು. ಇದೇ ವೇಳೆ ನೂತನ ಸಚಿವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಶೀಘ್ರವೇ ಖಾತೆ ಹಂಚಿಕೆ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಓದಿ: ಯಡಿಯೂರಪ್ಪನನ್ನು ನೋಡಿದ್ರೆ ನನಗೆ ಅಯ್ಯೋ ಪಾಪ ಅನ್ನಿಸುತ್ತೆ: ಸಿದ್ದರಾಮಯ್ಯ

Share This Article
Leave a Comment

Leave a Reply

Your email address will not be published. Required fields are marked *