– ನಮ್ಮ ಕಾರ್ಯಕರ್ತರು ನಮ್ಮನ್ನೇ ಕೇಳ್ತಿರೋದು, ಕಾಂಗ್ರೆಸ್ಸಿಗರನ್ನು ಕೇಳ್ತಿಲ್ಲ
ಬೆಂಗಳೂರು: ಕೊಲೆಗಳು ನಡೆದಾಗ ಯಾವ ರೀತಿ ನಿಭಾಯಿಸಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ ಎಮದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರತ್ಕಲ್ ನಲ್ಲಿ ಕೊಲೆ ಆಗಿದೆ ಎಂಬ ಮಾಹಿತಿ ಬಂದಿದೆ. ಎಡಿಜಿಪಿ ಲಾ ಆಂಡ್ ಆರ್ಡರ್ ಅವರಿಗೆ ಅಲ್ಲಿಯೇ ಇರಲು ಹೇಳಿದ್ದೇನೆ. ನಿನ್ನೆ ನಾನು ಪ್ರವೀಣ್ ಮನೆಗೆ ಹೋಗಿ ವಾಪಸ್ ಬರುವಾಗ ಮತ್ತೊಂದು ಕೊಲೆ ಆಗಿದೆ. ಈ ಮೂರು ಕೊಲೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅಲ್ಲಿನ ಜನರ ಬದುಕು ನಮಗೆ ಅಷ್ಟೇ ಪ್ರಮುಖ ಎಂದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಕೆಂಡಾಮಂಡಲರಾದ ಬೊಮ್ಮಾಯಿ, ಸಿದ್ದರಾಮಯ್ಯ ಹೇಳಿದ್ದೇ ವೇದವಾಕ್ಯ ಅಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 32 ಕೊಲೆಗಳು ಆಗಿವೆ. ಯಾವ ರೀತಿ ನಿಭಾಯಿಸಬೇಕು ಅಂತಾ ನಮಗೆ ಗೊತ್ತಿದೆ. ಎಲ್ಲವನ್ನೂ ರಾಜಕೀಯವಾಗಿ ಬಳಸಿಕೊಳ್ಳಬಾರದು. ಸಮಾಜಘಾತ ಶಕ್ತಿ ಗಳು ಇದಕ್ಕೆಲ್ಲ ಕುಮ್ಮಕ್ಕೂ ಇದೆ ಎಂದು ವಾಗ್ದಾಳಿ ನಡೆಸಿದರು.
ಕೇರಳ ಭಾಗದ 55 ರಸ್ತೆಗಳಲ್ಲಿ ನಾಕಾ ಬಂದಿ ಹಾಕಿ ಖಡಕ್ ತಪಾಸಣೆ ನಡೆಸಲು ಸೂಚಿಸಲಾಗಿದೆ. ಯಾರೂ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ನಮ್ಮ ಕಾರ್ಯಕರ್ತರು ನಮ್ಮನ್ನೇ ಕೇಳ್ತಿರೋದು, ಕಾಂಗ್ರೆಸ್ ಅವರನ್ನ ಕೇಳ್ತಿಲ್ಲ ಎಂದು ಸಿಎಂ ಗರಂ ಆದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಆಕ್ರೋಶ – ಕರಾವಳಿ ಬಿಜೆಪಿಗರ ಟ್ರ್ಯಾಕ್ ರೆಕಾರ್ಡ್ ತರಿಸಿದ ಹೈಕಮಾಂಡ್
10 ದಿನಗಳಲ್ಲಿ 3 ನೇ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿಯೊಂದು ಕೊಲೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ಡಿಜಿ, ಐಜಿಪಿ ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಕರಾವಳಿ ಭಾಗದಲ್ಲಿ ವಿಶೇಷ ಕಠಿಣ ಕ್ರಮ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇನೆ. ಕರಾವಳಿ ಕರ್ನಾಟಕ ಭಾಗದಲ್ಲಿ ನಿರ್ಬಂಧ ಹೇರುವ ಬಗ್ಗೆ ಚರ್ಚೆ ನಡೆಸುತ್ತೇನೆ. ಕರ್ನಾಟಕದಿಂದ ಕೇರಳ ಬಾರ್ಡರ್ಗೆ ಓಡಾಡುವ 58 ರಸ್ತೆಗಳಿವೆ. ಈ ವಿಚಾರವಾಗಿ ಉನ್ನತ ಮಟ್ಟದಲ್ಲಿ ಸಭೆ ನಡೆಸುತ್ತೇನೆ ಎಂದು ಹೇಳಿದರು.
ಸಹಜವಾಗಿಯೇ ಆಂತಕ ಇರುತ್ತೆ. ಅಷ್ಟೇ ಕ್ವಿಕ್ ಆಗಿ ಕ್ರಮ ಕೈಗೊಳ್ಳುತ್ತಿದ್ದೇವೆ. ಕೇರಳ ಕ್ರಾಸ್ ಬಾರ್ಡರ್ ನಿಂದ ಬರುತ್ತಿದ್ದಾರೆ. ಹಲವು ಅಯಾಮಗಳಿವೆ. ಅವೆಲ್ಲವನ್ನೂ ನಿಗ್ರಹಿಸಲು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಫಾಜಿಲ್ ಕೊಲೆಗೆ ಕಾರಣದ ಪ್ರಾಥಮಿಕ ಮಾಹಿತಿ ನನಗೆ ಗೊತ್ತಿಲ್ಲ. ಪೊಲೀಸರಿಗೆ ಗೊತ್ತಿರಬಹುದು, ತನಿಖೆ ನಡೆಸುತ್ತಿದ್ದಾರೆ. ರಿವೇಂಜ್ ಕೊಲೆನಾ ಎಂಬ ಪ್ರಶ್ನೆಗೆ ಮಾಹಿತಿ ಇಲ್ಲ ಎಂದ ಸಿಎಂ ತಿಳಿಸಿದರು.