ಚೇತನಾ ರಾಜ್ ಸಾವು: ಬಾಡಿ ಶೇಮಿಂಗ್‌ ವಿರುದ್ಧ ದನಿಯೆತ್ತಿದ ಅಶ್ವಿತಿ ಶೆಟ್ಟಿ

Public TV
1 Min Read

ಕಿರುತೆರೆಯ ಗೀತಾ, ದೊರೆಸಾನಿ ಸೀರಿಯಲ್ ಮೂಲಕ ಪರಿಚಿತರಾಗಿದ್ದ ನಟಿ ಚೇತನಾ ರಾಜ್ ಫ್ಲಾಟ್ ಸರ್ಜರಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಈಗ ಯುವ ನಟಿ ಚೇತನಾ ರಾಜ್ ಸಾವಿಗೆ ನಟಿ ಅಶ್ವಿತಿ ಶೆಟ್ಟಿ ಕಂಬನಿ ಮಿಡಿದಿದ್ದಾರೆ.

ಬಣ್ಣದ ಲೋಕದಲ್ಲಿ ತಾನು ಬೆಳಗಬೇಕು ಅಂತಾ ಸಾಕಷ್ಟು ಕನಸುಗಳನ್ನು ಹೊತ್ತು ಬಂದಿದ್ದ ಚೇತನಾ ರಾಜ್ ಪ್ಲಾಟ್ ಸರ್ಜರಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇದೀಗ ಯುವ ನಟಿಯ ಸಾವಿಗೆ ಅಶ್ವಿತಿ ಶೆಟ್ಟಿ ಕಂಬನಿ ಮಿಡಿದಿದ್ದಾರೆ. ಈ ಕುರಿತು ಅಶ್ವಿತಿ ಧ್ವನಿಯೆತ್ತಿದ್ದಾರೆ. ಚೇತನಾ ರಾಜ್ ಎಂಬ 21 ವರ್ಷದ ಹುಡುಗಿಯ ಸಾವಿನ ಸುದ್ದಿಯಿಂದ ನನ್ನ ಹೃದಯ ಛಿದ್ರಗೊಂಡಿದೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ. ಈ ಸಮಾಜ ಅದ್ಯಾವಾಗ ಬಾಡಿ ಶೇಮಿಂಗ್ ಮಾಡುವುದನ್ನು ನಿಲ್ಲಿಸುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ.

ತೆಳ್ಳಗಿರುವುದರ ಬಗ್ಗೆಯಾಗಲಿ ಅಥವಾ ದಪ್ಪಗಿರುವವರ ಬಗ್ಗೆಯಾಗಲಿ ನಾವೆಂದೂ ಕಾಮೆಂಟ್ ಮಾಡಬಾರದು. ನಾನು ಕೂಡ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದೇನೆ. ಆದರೆ ನಾನು ಕೆಟ್ಟ ಕಾಮೆಂಟ್‌ಗಳನ್ನು ಕೇರ್ ಮಾಡುವುದಿಲ್ಲ. ನಾನು ನನ್ನ ದೇಹವನ್ನು ಪ್ರೀತಿಸುತ್ತೇನೆ. ಬದುಕಿರುವುದೇ ದೊಡ್ಡ ಆರ್ಶೀವಾದ ಎಂದು ನಂಬಿದ್ದೇನೆ. ಎಲ್ಲರೂ ತಮ್ಮ ಜೀವವನ್ನು ಪ್ರೀತಿಸಿ ನೀವು ನೀವಾಗಿರಿ ಎಂದು ಸ್ಯಾಂಡಲ್‌ವುಡ್ ನಟಿ ಅಶ್ವಿತಿ ಶೆಟ್ಟಿ ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಬೆಂಗಳೂರಿಗೆ ಸನ್ನಿ ಲಿಯೋನ್ : ಮಂಡ್ಯಗೆ ಹೋಗಿ ರಕ್ತದಾನ ಮಾಡ್ತಾರಾ ಶೇಷಮ್ಮ?

`ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಸಿನಿಮಾ ಸೇರಿದಂತೆ ಹಲವಾರು ಚಿತ್ರ ಮತ್ತು ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *