ರೈತರ ಪ್ರೋತ್ಸಾಹ ಹಣ ಮಹಾರಾಷ್ಟ್ರದ ಪಾಲು – ಕಲಬುರಗಿಯ ಕೆಎಂಎಫ್‍ನಿಂದ ವಂಚನೆ

By
1 Min Read

ಕಲಬುರಗಿ: ರಾಜ್ಯ ಸರ್ಕಾರ ರೈತರು ಉತ್ಪಾದಿಸಿದ ಹಾಲಿಗೆ ಪ್ರೋತ್ಸಾಹ ಹಣ ನೀಡುತ್ತಿದೆ. ಆದ್ರೆ ಕಲಬುರಗಿ ನಗರದ ಕೆಎಂಎಫ್ ಕೇಂದ್ರ ಕಚೇರಿ, ರಾಜ್ಯ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ 2012 ರಿಂದ 15ರವರೆಗೆ ಮಹಾರಾಷ್ಟ್ರದಿಂದ ಅನಧಿಕೃತವಾಗಿ ಕಳಪೆ ಹಾಲು ಖರೀದಿಸ್ತಿದೆ.

ಅಲ್ಲದೇ ರೈತರ ಹೆಸರಿನಲ್ಲಿ ಕೋಟಿಗಟ್ಟಲೆ ಪ್ರೋತ್ಸಾಹ ಹಣ ಲಪಟಾಯಿಸಿದೆ. ಈ ಬಗ್ಗೆ ತನಿಖೆ ನಡೆಸಿದ ಇಲಾಖೆ ಹಗರಣದಲ್ಲಿ ಮಂಡಳಿಯ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದೆ. ಭ್ರಷ್ಟ ಅಧಿಕಾರಿಗಳ ಪರ ನಿಂತ ಕಲಬುರಗಿ-ಬೀದರ್ ಮತ್ತು ಯಾದಗಿರಿ ಮಂಡಳಿಯನ್ನು ವಜಾ ಮಾಡುವಂತೆ ತಿಳಿಸಿದೆ.

ಸದ್ಯ ಹಾಲು ಒಕ್ಕೂಟ ಮಂಡಳಿಯಲ್ಲಿ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಸಂಬಂಧಿ ರೇವಣ್ಣಸಿದ್ದಪ್ಪ ಅಧ್ಯಕ್ಷರಾಗಿದ್ದು, ಅಧಿಕಾರ ಬಳಸಿಕೊಂಡು ವರದಿಯನ್ನು ಜಾರಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ರೈತರ ಹೆಸರಲ್ಲಿ ಬರ್ತಿರೋ ಪ್ರೋತ್ಸಾಹ ಹಣ ಮಹಾರಾಷ್ಟ್ರದ ದಲ್ಲಾಳಿಗಳ ಪಾಲಾಗುತ್ತಿದೆ.

 

Share This Article
Leave a Comment

Leave a Reply

Your email address will not be published. Required fields are marked *