ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ: ಎಚ್‍ಡಿಕೆ

Public TV
1 Min Read

ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ಹೋಗಿರಬಹುದು. ಆದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ. ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, ಪರಮಪೂಜ್ಯರ ಆಶೀರ್ವಾದ ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದರು. ಬಮೂಲ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಕೆಎಂಎಫ್ ರಾಜ್ಯಕ್ಕೆ ಬರಲು ತಮ್ಮ ತಂದೆ, ಜೆಡಿಎಸ್ ವರಿಷ್ಠ ಎಚ್.ದೇವೇಗೌಡ ಅವರೇ ಕಾರಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಂಜಾವಧೂತ ಸ್ವಾಮೀಜಿಗಳು ಮಾತನಾಡಿ, ಎಚ್‍ಡಿ ಕುಮಾರಸ್ವಾಮಿ ಅವರು 20 ತಿಂಗಳ ಅಧಿಕಾರವನ್ನು ಜನರು ಇನ್ನೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಜನರು ಅಭಿಮಾನದಿಂದ ಮಾತನಾಡುತ್ತಾರೆ. ಅದಕ್ಕೂ ಹೆಚ್ಚಿನ ಆಡಳಿತವನ್ನು 14 ತಿಂಗಳಲ್ಲಿ ನೀಡಿದ್ದರು. ಅದನ್ನ ಜನರಿಗೆ ಮುಟ್ಟಿಸುವಲ್ಲಿ ಮಾಧ್ಯಮಗಳು ಸಹಕಾರ ನೀಡಲಿಲ್ಲ ಎಂಬ ಕೊರಗಿದೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಆದರೆ ಅವಕಾಶ ಸಿಗಲಿಲ್ಲ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ವೇದಿಕೆಯಲ್ಲಿಯೇ ಸಿಎಂ ಆಗ್ತಾರೆ ಎಂದು ತಿಳಿಸಿದ್ದೆ. ಈಗಲೂ ಹೇಳುತ್ತೇನೆ ಮುಂದೆ ಇನ್ನೊಮ್ಮೆ ರಾಜ್ಯವನ್ನು ಆಳುವ ಯೋಗ ಕುಮಾರಸ್ವಾಮಿ ಅವರಿಗೆ ಬರುತ್ತೆ ಎಂದು ತಿಳಿಸಿದರು.

ಇದೇ ವಿಚಾರವನ್ನು ಪ್ರಸ್ತಾಪಿಸಿದ ಎಚ್.ಡಿ.ಕುಮಾರಸ್ವಾಮಿ ಅವರು, ಎರಡು ಬಾರಿ ಚಿಕಿತ್ಸೆ ಆಗಿರುವಂತಹ ಹಿನ್ನೆಲೆಯಲ್ಲಿ ಸಣ್ಣ ಸಮಸ್ಯೆಯಿದ್ದು ಹಿಂದೆ ಓಡಾಡುತ್ತಿದ್ದ ಸ್ಪೀಡ್ ನನ್ನಲ್ಲಿಲ್ಲ. ನಾನೂ ಕೂಡ ಸೀನಿಯರ್ ಸಿಟಿಜನ್ 60 ವರ್ಷ ದಾಟಿದ್ದೇನೆ ಎಂದು ತಿಳಿಸಿದರು.

ಪರಮಪೂಜ್ಯ ಸ್ವಾಮೀಜಿಗಳು ಹೇಳಿದಂತೆ ಅವರ ಆರ್ಶೀವಾದ, ನಮ್ಮ ತಂದೆ ದೇವೇಗೌಡರು ಹಾಗೂ ನನ್ನನ್ನ ಪ್ರೀತಿಯಿಂದ ಕಾಣುವ ಲಕ್ಷಾಂತರ ಕುಟುಂಬದ ಜನರಿದ್ದಾರೆ. ನಿಮ್ಮ ಆರ್ಶೀವಾದದಿಂದ ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ. ಅದಕ್ಕೆ ಕಾರಣ ನಿಮ್ಮ ಆರ್ಶೀವಾದ ಹಾಗೂ ಪರಮಪೂಜ್ಯರ ಆರ್ಶಿವಾದ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *