ಸಿಎಂ ಪ್ರಶ್ನೆಗೆ ಉತ್ತರಿಸಿ, ಸಂಯಮದ ಪಾಠ ಹೇಳಿದ ಚಂಪಾ

Public TV
2 Min Read

ಧಾರವಾಡ: ನನ್ನ ಇಬ್ಬರು ಮಕ್ಕಳು 7ನೇ ತರಗತಿವರೆಗೂ ಕನ್ನಡ ಕಲಿತ್ತಿದ್ದು, ಆದರೆ ಸಿಎಂ ಅವರ ಮಕ್ಕಳು, ಮೊಮ್ಮಕ್ಕಳು ಯಾರು ಕನ್ನಡ ಕಲಿತ್ತಿದ್ದಾರೆ ಎಂದು ಉತ್ತರಿಸಲಿ ಎಂದು ಸಾಹಿತಿ ಚಂಪಾ ಪ್ರಶ್ನಿಸಿದ್ದಾರೆ.

ಸಿಎಂ ಅವರ ಕನ್ನಡ ಕಲಿಕೆಯ ಪ್ರಶ್ನೆ ಧಾರವಾಡದಲ್ಲಿ ಪಬ್ಲಿಕ್ ಟಿವಿಗೆ ಉತ್ತರಿಸಿ ಮಾತನಾಡಿದ ಚಂಪಾ ಅವರು, ಸಿಎಂ ಕುಮಾರಸ್ವಾಮಿ ಅವರು ನನ್ನ ಮನೆಯಲ್ಲಿ ಯಾರ್ಯಾರು ಕನ್ನಡ ಕಲಿತ್ತಿದ್ದಾರೆ ಎಂದು ಕೇಳಿದ್ದಾರೆ. ನನ್ನ ಇಬ್ಬರು ಮಕ್ಕಳು 7ನೇ ತರಗತಿವರೆಗೆ ಕನ್ನಡ ಕಲಿತ್ತಿದ್ದಾರೆ. ಮೊಮ್ಮಗ ಕೂಡಾ ಕನ್ನಡ ಕಲಿತ್ತಿದ್ದಾರೆ. ಆದರೆ ಸಿಎಂ ಅವರ ಮಕ್ಕಳು, ಮೊಮ್ಮಕ್ಕಳು ಯಾರು ಕನ್ನಡ ಕಲಿತ್ತಿದ್ದಾರೆ ಎಂಬುದು ಹೇಳಲಿ ಎಂದು ಪ್ರಶ್ನಿಸಿದರು.

ಸಿಎಂ ಅವರು ನನಗೆ ಪ್ರಶ್ನೆ ಮಾಡಿದ ಬಗ್ಗೆ ಬೇಸರವಿಲ್ಲ. ಆದರೆ ಅವರು ನೇರವಾಗಿ ಪ್ರಶ್ನೆ ಕೇಳಬಹುದಿತ್ತು, ಆದರೆ ಮಾಧ್ಯಮಗಳ ಮೂಲಕ ಪ್ರಶ್ನೆ ಕೇಳಿದ್ದಾರೆ. ಆದ್ದರಿಂದ ನಾನು ಕೂಡ ಮಾಧ್ಯಮಗಳಿಂದಲೇ ಉತ್ತರ ಕೊಡುತ್ತೆನೆ ಎಂದರು. ಅಲ್ಲದೇ ಕನ್ನಡದ ಬಗ್ಗೆ ತಾವು ಬಹಳ ಕಳಕಳಿ ವ್ಯಕ್ತಪಡಿಸಿದ್ದೀರಿ. ನೀವು ಒಂದು ಜಾತ್ಯಾತೀತ ಪಕ್ಷವಾದ ಕಾರಣ ನಿಮ್ಮ ಮಕ್ಕಳು ಯಾವ ಭಾಷೆಯಲ್ಲಿ ಓದುತ್ತಿದ್ದಾರೆ ಎಂದು ಕೇಳುತ್ತಿದ್ದೇನೆ ಎಂದರು.

ನಾನು ಬಹಳ ಮುಖ್ಯಮಂತ್ರಿಗಳನ್ನು ನೋಡಿದ್ದು, ರಾಜಕಾರಣಿಗಳು ಬಹಳ ಗಂಭೀರವಾಗಿ ಇರಬೇಕು. ಮಾತನಾಡುವಾಗ ತಾಳ್ಮೆ ಕಳೆದುಕೊಳ್ಳದೆ ಮಾತನಾಡಬೇಕು. ಮಾಜಿ ಪ್ರಧಾನಿಗಳಾದ ಎಚ್‍ಡಿ ದೇವೆಗೌಡರು ತಾಳ್ಮೆ ಮನುಷ್ಯ, ಆದರೆ ಅವರ ಮಗ ಯಾಕೋ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅವರ ಗೆಳೆಯನಾಗಿ ನಾನು ಅವರು ಸಂಯಮದಿಂದ ಇರಬೇಕು ಎಂದು ಹೇಳುವೆ ಎಂದು ತಿಳಿಸಿದರು. ಅಲ್ಲದೇ ಸಮ್ಮೇಳನದಲ್ಲಿ ಸಿಎಂ ಅವರು ಕೊಟ್ಟ ಮಾತು ನಡೆಸಿಕೊಟ್ಟರೆ ಸಾಕು ಎಂದರು.

ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ದಿನ ಚಂಪಾ ಅವರು ವೇದಿಕೆ ಮೇಲೆ ಮಾತನಾಡುತ್ತಾ ಕನ್ನಡ ಇಂಗ್ಲಿಷ್ ಶಾಲೆಗಳ ಬಗ್ಗೆ ಸಿಎಂ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಸಿಎಂ ಗರಂ ಕೂಡ ಆಗಿದ್ರು. ಈ ಕುರಿತು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಚಂಪಾ ಅವರ ಮಕ್ಕಳು ಯಾವ ಮಾಧ್ಯಮದಲ್ಲಿ ಓದಿದ್ದಾರೆ ಎಂದು ತಿಳಿಸಲಿ ಎಂದು ಪ್ರಶ್ನೆ ಮಾಡಿದ್ದರು. ಸದ್ಯ ಸಿಎಂ ಅವರ ಮಾತಿಗೆ ಚಂಪಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *