ಪೊಲೀಸರಿಲ್ಲದೇ ರಿಕ್ಷಾ ಚಾಲಕನು ರಾಜಕಾರಣಿಗಳ ಮಾತು ಕೇಳಲ್ಲ – ಸಿಧು ವಿರುದ್ಧ ಡಿಎಸ್‍ಪಿ ಕಿಡಿ

Public TV
1 Min Read

ಚಂಡೀಗಢ: ಪೊಲೀಸರು ಇಲ್ಲದೇ ರಿಕ್ಷಾ ಚಾಲಕನು ಸಹ ರಾಜಕಾರಣಿಗಳ ಮಾತನ್ನು ಕೇಳುವುದಿಲ್ಲ ಎಂದು ಹೇಳುವ ಮೂಲಕ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ಚಂಡೀಗಢ ಉಪ ಪೊಲೀಸ್ ವರಿಷ್ಠಾಧಿಕಾರಿ ದಿಲ್ಶರ್ ಚಾಂಡೇಲ್ ಕಿಡಿಕಾರಿದ್ದಾರೆ.

ಕೆಲವು ದಿನಗಳ ಹಿಂದೆ ನವಜೋತ್ ಸಿಂಗ್ ಸಿಧು ಅವರು ಸಾರ್ವಜನಿಕ ರ್‍ಯಾಲಿ ವೇಳೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಪೊಲೀಸರ ಪ್ಯಾಂಟ್ ಒದ್ದೆ ಮಾಡುವಂತೆ ಹೇಳಿದ್ದರು. ಇದೀಗ ಈ ಹೇಳಿಕೆ ಕುರಿತಂತೆ ದಿಲ್ಶರ್ ಚಾಂಡೇಲ್ ಅವರು, ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಹಿರಿಯ ನಾಯಕರೊಬ್ಬರು ತಮಗೆ ರಕ್ಷಣೆ ಒದಗಿಸುವ ಪೊಲೀಸ್ ಪಡೆಯನ್ನು ಅವಮಾನಿಸಿರುವುದು ತುಂಬಾ ನಾಚಿಕೆಗೇಡಿನ ಸಂಗತಿ. ಪೊಲೀಸರು ಇಲ್ಲದೇ ರಿಕ್ಷಾ ಚಾಲಕನು ಸಹ ರಾಜಕಾರಣಿಗಳ ಮಾತನ್ನು ಕೇಳುವುದಿಲ್ಲ ಹಾಗಾಗಿ ರಾಜಕಾರಣಿಗಳು ಪೊಲೀಸರನ್ನು ಗೇಲಿ ಮಾಡಬಾರದು ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಅಂಕಲ್ ಅಂದಿದ್ದೆ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

ಡಿಸೆಂಬರ್ 19 ರಂದು ಕಪುರ್ತಲಾ ಜಿಲ್ಲೆಯ ಸುಲ್ತಾನ್‍ಪುರ್ ಲೋಧಿಯಲ್ಲಿ ನಡೆದ ಪಕ್ಷದ ರ್‍ಯಾಲಿ ವೇಳೆ ಮಾತನಾಡಿದ ನವಜೋತ್ ಸಿಧು, ಕಾಂಗ್ರೆಸ್ ಶಾಸಕ ನವತೇಜ್ ಸಿಂಗ್ ಚೀಮಾ ಎಷ್ಟು ಶಕ್ತಿಶಾಲಿಯಾಗಿದ್ದರು ಎಂದರೆ ಪೊಲೀಸ್ ಅಧಿಕಾರಿಗಳ ಪ್ಯಾಂಟ್ ಒದ್ದೆ ಮಾಡಬಹುದಾದಷ್ಟು ಎಂದಿದ್ದರು. ಅಲ್ಲದೇ ತಮ್ಮ ಪಕ್ಷದ ಕಾರ್ಯಕರ್ತರಿಗೂ ಅದೇ ರೀತಿ ಇರಬೇಕು ಎಂದು ಹೇಳಿದ್ದರು. ಇದನ್ನೂ ಓದಿ: 29 ವರ್ಷದ ಬಳಿಕ ಪಾಕಿಸ್ತಾನದ ಜೈಲಿನಿಂದ ತಾಯಿನಾಡಿಗೆ ಕಾಲಿಟ್ಟ ಕುಲದೀಪ್ ಸಿಂಗ್

Share This Article
Leave a Comment

Leave a Reply

Your email address will not be published. Required fields are marked *