ಅದ್ಧೂರಿ ಕರಗ ಮಹೋತ್ಸವ – ಅಗ್ನಿಕೊಂಡ ಹಾಯ್ದ ದೇವಿಯ ಪ್ರಧಾನ ಅರ್ಚಕ

Public TV
1 Min Read

ರಾಮನಗರ: ಐತಿಹಾಸಿಕ ಹಾಗೂ ಆಷಾಢ ಮಾಸದಲ್ಲಿ ನಡೆಯುವ ಕರಗ ಮಹೋತ್ಸವಗಳಲ್ಲಿ ಒಂದಾದ ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.

ನಾಡದೇವತೆ ಚಾಮುಂಡೇಶ್ವರಿ ದೇವಿಯ ಪ್ರಧಾನ ಅರ್ಚಕ ದೇವಿಪ್ರಸಾದ್ ಸಿಂಗ್ ಅಗ್ನಿಕೊಂಡವನ್ನು ಹಾಯ್ದರು. ಆಷಾಢ ಮಾಸದಲ್ಲಿ ನಡೆಯುವ ಚಾಮುಂಡೇಶ್ವರಿ ಕರಗ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ನಗರದ ಏಳು ದೇವತೆಗಳ ಕರಗಮಹೋತ್ಸವವೂ ಕೂಡ ಆಷಾಢದಲ್ಲಿಯೇ ನಡೆಯುತ್ತದೆ.

ಮಂಗಳವಾರ ರಾತ್ರಿ ಚಾಮುಂಡೇಶ್ವರಿ ಕರಗ ಸಮಿತಿ ವತಿಯಿಂದ ಗಾಯಕ ವಿಜಯ್ ಪ್ರಕಾಶ್ ನೇತೃತ್ವದಲ್ಲಿ ಮ್ಯೂಸಿಕಲ್ ನೈಟ್ಸ್ ನಡೆಸಲಾಯಿತು. ಸಂಗೀತ ರಸಸಂಜೆಯಲ್ಲಿ ಗಾಯಕರ ಗೀತೆಗೆ ಸಾರ್ವಜನಿಕರು ಹುಚ್ಚೆದ್ದು ಸ್ಟೆಪ್ಸ್ ಹಾಕಿದರು.

ಇಂದು ಬೆಳಗ್ಗೆ ನಡೆದ ಅಗ್ನಿಕೊಂಡವನ್ನ ನೋಡಲು ಜಿಲ್ಲೆಯ ವಿವಿಧ ಕಡೆಗಳಿಂದ ಜನಸಾಗರವೇ ಹರಿದು ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *