ಅವರೊಬ್ಬರ ಫೋನ್ ಕಾಲ್ ವಿಷ ಪ್ರಸಾದ ಪ್ರಕರಣದ ಸುಳಿವು ನೀಡಿತ್ತು!

Public TV
2 Min Read

– ಕಾಲ್ ರೆಕಾರ್ಡ್ ನೀಡಿದ್ದ ಕೃಷಿ ಅಧಿಕಾರಿ
– ಕೃಷಿ ಅಧಿಕಾರಿಯ ಜೊತೆ ರೇಗಾಡಿದ್ದ ಅಂಬಿಕಾ

ಚಾಮರಾಜನಗರ: ಕೃಷಿ ಅಧಿಕಾರಿಯೊಬ್ಬರು ನೀಡಿದ ಫೋನ್ ಕಾಲ್ ಮಾಹಿತಿ ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಕರಣವನ್ನು ಬಯಲು ಮಾಡಲು ಸಹಾಯವಾಗಿದೆ.

ಕೃಷಿ ಅಧಿಕಾರಿ ಶಿವಣ್ಣ ಅವರು ಮೊಬೈಲ್ ಮೂಲಕ ಆರೋಪಿ ಅಂಬಿಕಾ ಜೊತೆಗೆ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದರು. ದುರಂತ ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ ಪೊಲೀಸರಿಗೆ ಕಾಲ್ ರೆಕಾರ್ಡ್ ನೀಡಿದ ಪರಿಣಾಮ ಎಲ್ಲ ಆರೋಪಿಗಳ ಬಂಧನ ಕೆಲಸ ಸುಲಭವಾಗಿದೆ.

ಸಂದೇಹ ಬಂದಿದ್ದು ಹೇಗೆ?
ಸುಳ್ವಾಡಿ ದೇವಾಲಯದ ಪ್ರಸಾದ ಸೇವಿಸಿದವರ ದೇಹದಲ್ಲಿ ಮನೋಕ್ರೋಟೋಫೋಸ್ ಅಂಶ ವೈದ್ಯಕೀಯ ವರದಿಯಲ್ಲಿ ಪತ್ತೆಯಾಗಿದ್ದನ್ನು ಕಂಡು ಶಿವಣ್ಣ ಅವರಿಗೆ ಸ್ವಲ್ಪ ಅನುಮಾನ ಬಂದಿದೆ. 10 ದಿನಗಳ ಹಿಂದೆ ಅಂಬಿಕಾ ನನ್ನ ಬಳಿ ಗಿಡಗಳಿಗೆ ರೋಗ ಬಂದಿದೆ ಎಂದು ಹೇಳಿ ಈ ಕೀಟನಾಶಕವನ್ನು ತೆಗೆದುಕೊಂಡು ಹೋಗಿದ್ದಳು. ಈ ರಾಸಾಯನಿಕ ಪ್ರಸಾದದಲ್ಲಿ ಸೇರಿದ್ದು ಹೇಗೆ ಎಂದು ಶಿವಣ್ಣ ತಲೆಕೆಡಿಸಿಕೊಂಡಿದ್ದಾರೆ.

ಅನುಮಾನ ಬಂದ ಹಿನ್ನೆಲೆಯಲ್ಲಿ ನಾನು ಕೊಟ್ಟ ಔಷಧಿಯೇ ಈ ಅನಾಹುಕ್ಕೆ ಕಾರಣವಾಯಿತೇ ಎಂದು ಶಿವಣ್ಣ ಅವರು ಫೋನ್ ಮಾಡಿ ಅಂಬಿಕಾಳನ್ನು ಕೇಳಿದ್ದಾರೆ. ಈ ವೇಳೆ ಸತ್ಯ ಒಪ್ಪಿಕೊಳ್ಳದ ಅಂಬಿಕಾ ನೀವು ಕೊಟ್ಟ ಔಷಧಿಯನ್ನು ಗಿಡಕ್ಕೆ ಬಳಸಿದ್ದೇನೆ. ನಾವೇನೂ ವಿಷ ಹಾಕುವವರು ಅಂತಾ ತಿಳಿದುಕೊಂಡಿದ್ದಾರಾ ಎಂದು ಪ್ರಶ್ನಿ ಅಂಬಿಕಾ ರೇಗಾಡಿದ್ದಾಳೆ. ಪ್ರಕರಣದ ಕುರಿತು ಬಾಯಿ ಬಿಡಿಸಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಶಿವಣ್ಣ ಆಕೆಯ ಜೊತೆಗೆ ಮಾತನಾಡಿದ್ದನ್ನು ಸಂಪೂರ್ಣವಾಗಿ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಇದನ್ನು ಪೊಲೀಸರಿಗೆ ನೀಡಿ ತನಿಖೆಗೆ ಸಹಾಯ ಮಾಡಿದ್ದಾರೆ.

ಅಂಬಿಕಾಗೆ ವಿಷ ಪಡೆದಿದ್ದ ಹೇಗೆ?:
ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶವನ್ನು ಇಮ್ಮಡಿ ಮಹದೇಸ್ವಾಮಿ ಹೊಂದಿದ್ದ. ಈ ನಿಟ್ಟಿನಲ್ಲಿ ತನ್ನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಅಂಬಿಕಾ ಸಹಾಯ ಕೂಡ ಪಡೆದಿದ್ದ. ಮಾರಮ್ಮ ದೇವಿ ಶಂಕುಸ್ಥಾಪನೆ ದಿನದಂದು ಪ್ರಸಾದಕ್ಕೆ ವಿಷ ಬೆರೆಸಲು ಪ್ಲಾನ್ ರೂಪಿಸಿದ್ದ ಅಂಬಿಕಾ, ಮನೆಯ ಗಿಡಗಳಿಗೆ ರೋಗ ಬಂದಿದೆ ಎಂದು ಕೃಷಿ ಅಧಿಕಾರಿ ಶಿವಣ್ಣ ಅವರ ಬಳಿ ಕ್ರಿಮಿನಾಶಕ ಕೊಡಿ ಎಂದು ಕೇಳಿದ್ದಳು. ಆಕೆಯ ಮಾತು ನಂಬಿದ್ದ ಅಧಿಕಾರಿ 500 ಮೀ ಲೀಟರ್ ನಂತೆ 2 ಬಾಟಲ್ ಮನೋಕ್ರೋಟೋಫೋಸ್ ಕೀಟನಾಶಕವನ್ನು ಕೊಟ್ಟಿದ್ದರು.

ಅಂಬಿಕಾ ಖತರ್ನಾಕ್ ಪ್ಲಾನ್:
ಪ್ರಸಾದ ಮುಗಿದಿದೆ ಎಂದು ಪತಿ ಮಾದೇಶ್ ಫೋನ್ ಮಾಡಿ ಹೇಳಿದ ಮೇಲೆ ಅಂಬಿಕಾ ದೇವಸ್ಥಾನಕ್ಕೆ ಹೋಗಿದ್ದಳು. ದೇವಸ್ಥಾನಕ್ಕೆ ಹೋದ ತಕ್ಷಣ ಕೆಲಸ ಸರಿಯಾಗಿ ಆಗಿದೆಯಾ ಅಂತ ಅಡುಗೆ ಮನೆ ಹೋಗಿ ಪರಿಶೀಲನೆ ಮಾಡಿದ್ದಳು. ತಾನು ಅಂದುಕೊಂಡಂತೆ ಕೆಲಸ ಮುಗಿದಿದೆ ಎನ್ನುವುದು ಖಚಿತ ಪಡೆಸಿಕೊಂಡು ದೇವರ ಬಳಿ ಹೋಗಿ ತೀರ್ಥವನ್ನು ಕೂಡ ಪಡೆದಿರಲಿಲ್ಲ. ಈ ವೇಳೆ ದೇವಾಲಯದಲ್ಲಿಯೇ ಅರ್ಚಕ ದೊಡ್ಡಯ್ಯನಿಗೆ ಎರಡು ಸಾವಿರ ರೂ. ನೀಡಿದ್ದಾಳೆ.

https://www.youtube.com/watch?v=9QOHKI5h4z8

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *