ಮಂಡ್ಯದ ಸೈನಿಕನ ಜೊತೆ ಸಾರಥಿ ವೀಡಿಯೋ ಕಾಲ್!

Public TV
1 Min Read

ಮಂಡ್ಯ: ಪ್ರಚಾರದ ಅಬ್ಬರ ನಡುವೆಯೇ ಯೋಧರೊಬ್ಬರ ಜೊತೆ ವಿಡಿಯೋ ಕಾಲ್ ಮೂಲಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತುಕತೆ ನಡೆಸಿದ್ದಾರೆ.

ಶ್ರೀರಂಗಪಟ್ಟಣದ ಮೂಳೆಕೊಪ್ಪಲು ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಯೋಧ ತನ್ನ ನೆಚ್ಚಿನ ನಟನಿಗೆ ವಿಡಿಯೋ ಕಾಲ್ ಮಾಡಿ ಶುಭ ಹಾರೈಸಿದ್ದಾರೆ.

ಮಧ್ಯಾಹ್ನದ ಊಟ ಮುಗಿಸಿ ಸೈನಿಕನ ಜೊತೆ ವೀಡಿಯೋ ಕಾಲ್ ಮೂಲಕ ಮಾತನಾಡಿದ ದರ್ಶನ್, ನಿಮ್ಮ ಮಾತಿನಿಂದ ನಮಗೆ ಮತ್ತಷ್ಟು ಧೈರ್ಯ ಸಿಕ್ಕಿದೆ ಎಂದು ಹೇಳಿದರು. ಅಭಿಮಾನಿ ಯೋಧ ಜಮ್ಮು ಗಡಿ ಸೇನಾ ಕ್ಯಾಂಪ್ ನಿಂದ ದರ್ಶನ್ ಅವರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಅಲ್ಲದೆ ಪೋಸ್ಟಲ್ ಬ್ಯಾಲಟ್ ಮೂಲಕ ಮತ ಹಾಕುವುದಾಗಿ ಹೇಳಿದ್ದಾರೆ. ಯೋಧನ ಮಾತಿಗೆ ದರ್ಶನ್ ಥ್ಯಾಂಕ್ಯೂ.. ಥ್ಯಾಂಕ್ಯೂ.. ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *