ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಬಲಗೈಗೆ ಮತ್ತೆ ಗಾಯ!

Public TV
1 Min Read

ಮಂಡ್ಯ: ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೈಗೆ ಪೆಟ್ಟು ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ದರ್ಶನ್ ನಾಗಮಂಗಲದಲ್ಲಿ ನಡೆದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಚಾರಕ್ಕೆ ಬಂದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲೆಂದು ದರ್ಶನ್ ಇರುವ ಕಡೆ ನುಗ್ಗಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಈ ಹಿಂದೆ ಅಪಘಾತದಲ್ಲಿ ಫ್ರಾಕ್ಚರ್ ಆಗಿದ್ದ ದರ್ಶನ್ ಕೈ ಹಿಡಿದು ಎಳೆದಾಡಿದ್ದಾರೆ.

ಈ ಹಿಂದೆಯೇ ಅಪಘಾತದಲ್ಲಿ ದರ್ಶನ್ ಬಲಗೈಗೆ ನೋವಾಗಿತ್ತು. ಇದೀಗ ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ ದರ್ಶನ್ ಬಲಗೈಗೆ ಮತ್ತೆ ನೋವಾಗಿದೆ. ಹಾಗಾಗಿ ದರ್ಶನ್ ಬಲಗೈ ನೋವಿನಿಂದ ಬೆಂಗಳೂರಿನ ಕಡೆ ದರ್ಶನ್ ಪ್ರಯಾಣಿಸಿದ್ದಾರೆ.

ಈ ಬಗ್ಗೆ ಸುಮಲತಾ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಮೊದಲೇ ಅವರ ಕೈ ಫ್ರಾಕ್ಚರ್ ಆಗಿತ್ತು. ಗುರುವಾರ ಪ್ರಚಾರದ ವೇಳೆಯಲ್ಲಿನ ತಳ್ಳಾಟ ನೂಕಾಟದಲ್ಲಿ ಮತ್ತಷ್ಟು ಪೆಟ್ಟಾಗಿದೆ. ಸದ್ಯ ಅವರು ರೆಸ್ಟ್ ತೆಗೆದುಕೊಂಡು ಮತ್ತೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *