ಚೈತ್ರಾ ಕುಂದಾಪುರ ಡೀಲ್ ಕೇಸ್- RSS ಕದ ತಟ್ಟಿದ್ದ ಗೋವಿಂದ ಪೂಜಾರಿ!

By
1 Min Read

ಬೆಂಗಳೂರು: ಚೈತ್ರಾ ಕುಂದಾಪುರ & ಗ್ಯಾಂಗ್‍ನಿಂದ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೊಸ ಹೋಗಿದ್ದ ಗೋವಿಂದ ಪೂಜಾರಿ ವಂಚನೆ ವಿಚಾರವಾಗಿ ಏಪ್ರಿಲ್ ತಿಂಗಳಲ್ಲೇ ಆರ್ ಎಸ್‍ಎಸ್ (RSS) ಕದ ತಟ್ಟಿದ್ದರಂತೆ.

ಈ ವೇಳೆ ಆರ್‍ಎಸ್‍ಎಸ್ ನಾಯಕರು ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಚೈತ್ರಾ ಹಿಂದುತ್ವದ ಬಗ್ಗೆ ಭಾಷಣ ಮಾಡಿದ ಮಾತ್ರಕ್ಕೆ ವಂಚನೆ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ ಎಂದಿದ್ದಾರಂತೆ. ಈ ರೀತಿ ವ್ಯವಹಾರಗಳು ಟಿಕೆಟ್ (BJP Ticket) ಕೊಡಿಸುವ ವಿಚಾರಗಳಲ್ಲಿ ಆರ್‍ಎಸ್‍ಎಸ್ ಹೀಗೆಲ್ಲ ಮಧ್ಯಪ್ರವೇಶ ಮಾಡಿಲ್ಲ ಎಂದಿದ್ರಂತೆ.

ಹಣ ಕೊಟ್ಟು ಟಿಕೆಟ್ ಪಡೆಯಲು ಮುಂದಾಗಿದ್ದ ಗೋವಿಂದ ಪೂಜಾರಿಗೆ ನೀವೇ ಸಮಸ್ಯೆ ಬಗೆಹರಿಸಿಕೊಳ್ಳಿ. ಇಲ್ಲ ಬಿಜೆಪಿ ಅವ್ರ ಹತ್ರ ಮಾತಾಡಿ. ನಾವು ಮಾತ್ರ ಸಂಧಾನ ಮಾಡಿಸಲ್ಲ ಅಂತಾ ಆರ್ ಎಸ್‍ಎಸ್ ನಾಯಕರು ಹೇಳಿದ್ದಾರಂತೆ. ಒಂದು ವೇಳೆ ಬಿಜೆಪಿ ನಾಯಕರು ಬಗೆಹರಿಸದಿದ್ದರೆ ಕಾನೂನು ಇದೆ ಹೋಗಿ ಎಂದು ಸಂದೇಶ ಕೊಟ್ಟಿದ್ದಾರಂತೆ. ಇದನ್ನೂ ಓದಿ: CCB ಅಧಿಕಾರಿಗಳ ಮುಂದೆ ಮೌನಾಚರಣೆ – ಚೈತ್ರಾಳ ಮುಂದಿರುವ ಆ 30 ಪ್ರಶ್ನೆಗಳೇನು?

ಇದೆಲ್ಲ ಕಹಾನಿ ನಡೆದು 4 ತಿಂಗಳ ಕಾಲ ಹಣ ವಾಪಸ್ ಪಡೆಯಲು ಗೋವಿಂದ ಪೂಜಾರಿ ನಾನಾ ಸರ್ಕಸ್ ನಡೆಸಿದ್ರಂತೆ. ಯಾವಾಗ ಬಿಜೆಪಿ ನಾಯಕರೂ ಸಂಧಾನಕ್ಕೆ ಡೋಂಟ್ ಕೇರ್ ಅಂದ್ರೋ ಆಗ ಗೋವಿಂದ ಪೂಜಾರಿ ಚೈತ್ರಾ& ಗ್ಯಾಂಗ್ ವಿರುದ್ಧ ದೂರು ಕೊಟ್ಟಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್