ಡಿವಿಎಸ್‍ಗೆ ಡಿಸ್ಟಿಲ್ಡ್ ವಾಟರ್ ಕುಡಿಸಿದ್ದ ಇಮ್ಮಡಿ ಸ್ವಾಮೀಜಿ

Public TV
1 Min Read

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ 15 ಮಂದಿಯ ಸಾವಿಗೆ ಕಾರಣವಾದ ಪ್ರಮುಖ ಆರೋಪಿ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ, ಈ ಹಿಂದೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡರಿಗೆ ಡಿಸ್ಟಿಲ್ಡ್ ವಾಟರ್ ಕುಡಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿವಿ ಸದಾನಂದ ಗೌಡರು ಮಲೆ ಮಾದೇಶ್ವರ ದೇವರ ದರ್ಶನಕ್ಕೆ ಬಂದಿದ್ದು, ಅಲ್ಲೇ ತಂಗಿದ್ದರು. ದೇವರ ದರ್ಶನಕ್ಕೆ ಬಂದಿದ್ದ ಡಿವಿಎಸ್ ಗೆ ಊಟದ ವ್ಯವಸ್ಥೆಯನ್ನು ಸ್ವಾಮೀಜಿ ಮಾಡಿಸಿದ್ದರು. ಡಿವಿಎಸ್ ತಿಂಡಿಗಾಗಿ ಸಾಲೂರು ಮಠಕ್ಕೆ ತೆರಳಿದ್ದರು. ಈ ವೇಳೆ ಡಿವಿಎಸ್ ಜೊತೆ ಇತರೆ ಗಣ್ಯರಿಗೂ ಇಮ್ಮಡಿ ಮಹದೇವ ಸ್ವಾಮೀಜಿ ಡಿಸ್ಟಿಲ್ಡ್ ವಾಟರ್ ಕುಡಿಸಿದ್ದರು.

ಪರಿಣಾಮ ಡಿವಿಎಸ್‍ಗೆ ಎದೆ ಉರಿ ಕಾಣಿಸಿಕೊಂಡಿದ್ದು, ಕೂಡಲೇ ಅವರಿಗೆ ಮಲೆ ಮಹದೇಶ್ವರ ಬೆಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸ್ವಾಮೀಜಿ, ಕಣ್ತಪ್ಪಿನಿಂದ ಈ ಘಟನೆ ಆಯ್ತು ಅಂತ ಸಮಜಾಯಿಶಿ ಕೊಟ್ಟಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *