ಸಿಎಂ ನಮ್ಮನ್ನು ಒಡೀತಾನೆ, ದೇವಸ್ಥಾನ, ಮಠದ ಆದಾಯದ ಮೇಲೆ ಕಣ್ಣಾಕಿದ್ದಾನೆ- ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ವಾಗ್ದಾಳಿ

Public TV
2 Min Read

ಬೆಳಗಾವಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ನಾಲಗೆ ಹರಿಯಬಿಟ್ಟಿದ್ದು, ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತಯಾಚಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ನಮ್ಮನ್ನು ಒಟ್ಟಾಗಿರೋಕೆ ಬಿಡಲ್ಲ. ನಮ್ಮನ್ನು ಒಡೀತಾನೆ, ದೇಶವನ್ನು ಹಾಳು ಮಾಡ್ತಾನೆ. ದೇವಸ್ಥಾನ, ಮಠದ ಆದಾಯದ ಮೇಲೆ ಕಣ್ಣಾಕಿದ್ದಾನೆ. ನಾವೆಲ್ಲಾ ಒಟ್ಟಾಗಿ ನಿಲ್ಲಲ್ಲ ಅನ್ನೋದು ನಮ್ಮ ವೀಕ್ನೆಸ್. ದೇಶದಲ್ಲಿ ಕಾಂಗ್ರೆಸ್ ಕೇವಲ ಸೋಲಬಾರದು. ಆತ್ಮಹತ್ಯೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಹೀನಾಯವಾಗಿ ಸೋತು ಇನ್ನೆಂದೂ ಮತ ಕೇಳೋಕೆ ಬರಬಾರದು ಅಂತ ಕಿಡಿಕಾರಿದ್ದಾರೆ.


ಹಿಂದೂಗಳಲ್ಲಿ ಇರೋ ಜಾತಿ ಪದ್ಧತಿಯಲ್ಲಿ ನಾವು ಒಡೆದು ಸಾಯುತ್ತಿದ್ದೇವೆ. ನಾವೆಲ್ಲ ನಮ್ಮ ದೇಶ, ಧರ್ಮ ಎಂದು ಒಟ್ಟಾದ್ರೆ ಸಿದ್ದರಾಮಯ್ಯನಂತಹ ಕುತಂತ್ರಿಗಳು ಈ ದೇಶದಲ್ಲಿ ಬದುಕಲು ಸಾಧ್ಯವಿಲ್ಲ.  70 ವರ್ಷದಿಂದ ಪಾಪ ಮಾಡಿರುವ ಕಾಂಗ್ರೆಸ್ ಗೆ ಇಲ್ಲಿ ಬದುಕಲು ಅಧಿಕಾರವಿಲ್ಲ. ನೀವೇನಾದ್ರೂ ಕಾಂಗ್ರೆಸ್ಸಿಗರನ್ನ ಒಡೆದ್ರೆ ನಿಮ್ಮ ಕೈ ಕೊಳೆಯಾಗುತ್ತೆ. ಹೀಗಾಗಿ ಅವರೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿ. ಕಾಂಗ್ರೆಸ್ ಗೆ ನೈತಿಕತೆ ಇದ್ರೆ, ದೇಶದ ಬಗ್ಗೆ ಕಳಕಳಿ ಇದ್ರೆ, ಇನ್ನೂ ಮುಂದೆ ಸುಳ್ಳು ಹೇಳುವುದಿಲ್ಲ ಎಂದು ಹೇಳಿ ಮುಖಕ್ಕೆ ಮಸಿ ಬಡಿದುಕೊಂಡು ಹೋಗಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ನ ಆತ್ಮಹತ್ಯೆ ಸಿದ್ಧತೆ ನಡೆದಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಅಂತ ಹೇಳಿದ್ರು.

ಕಾಂಗ್ರೆಸ್ ನ ದೊಡ್ಡ ದೊಡ್ಡ ನೇತಾರರು ಆ ಮನೆ ಖಾಲಿ ಮಾಡಿ ಬಿಜೆಪಿಗೆ ಬರುತ್ತಿದ್ದಾರೆ. ದೆವ್ವ ಹೊಕ್ಕಿರುವ ಮನೆಯಲ್ಲಿ ಯಾರು ಇರುವುದಿಲ್ಲ. ಸಿದ್ದರಾಮಯ್ಯ ಇರುವ ಕಡೆ ಯಾರು ನಿಲ್ಲುವುದಿಲ್ಲ. ಕರ್ನಾಟಕದ ಜನ ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯನ ಮನೆಗೆ ಕಳುಹಿಸಬೇಕು ಯಡಿಯೂರಪ್ಪನ ಸಿಎಂ ಮಾಡಬೇಕೆಂದು. ಮೋದಿಯವರ ಯೋಜನೆ ಇಲ್ಲಿನ ಹಳ್ಳಿಗಳಿಗೆ ಬಂದಿಲ್ಲ. ಇದಕ್ಕೆ ಕಾರಣ ಕರ್ನಾಟಕದಲ್ಲಿ ರಾವಣ ರಾಜ್ಯ ಇದೆ ಎಂದು ಕಿಡಿಕಾರಿದ್ರು.

ಪಡಿತರ ಅಕ್ಕಿಗೆ ಮೋದಿ 29ರೂ. ಕೋಡ್ತಾರೆ. ರಾಜ್ಯ ಸರ್ಕಾರ 3ರೂ. ಕೊಡ್ತಾರೆ. ಆದ್ರೇ ಬಿಕನಾಸಿ ಸಿದ್ದರಾಮಯ್ಯ ಗೆ ಮೋದಿ ಫೋಟೋ ಹಾಕುವ ಯೋಗ್ಯತೆ ಇಲ್ಲ. ಮೋದಿ ಕರ್ನಾಟಕ ಸರ್ಕಾರಕ್ಕೆ 1.63 ಸಾವಿರ ಕೋಟಿ ಅಭಿವೃದ್ಧಿಗೆ ಕೊಟ್ಟಿದ್ದಾರೆ. ಆದ್ರೆ ಈ ಹಣವನ್ನ ಕಾಂಗ್ರೆಸ್ ನವರು ಮೊದಲನೇ ಮನೆಯಲ್ಲಿ ಇಡ್ತಾರೋ, ಎರಡನೇ ಮನೆಯಲ್ಲಿ ಇಡ್ತಾರೋ ಗೊತ್ತಾಗುವುದಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *