ಸಸ್ಪೆನ್ಸಲ್ಲೇ ಅಮಿತ್ ಶಾ ರಾಜ್ಯ ಪ್ರವಾಸ ಅಂತ್ಯ – ಮೋದಿ ರಿಟರ್ನ್ ಬಳಿಕ ದೊಡ್ಡ ನಿರ್ಧಾರನಾ?

Public TV
2 Min Read

ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಅವರ ರಾಜ್ಯ ಪ್ರವಾಸ ಬಿಜೆಪಿಯಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಮೊನ್ನೆ ಬಿಎಲ್ ಸಂತೋಷ್ ಆಡಿದ್ದ ನಿಗೂಢಾರ್ಥದ ಮಾತುಗಳು ಅಮಿತ್ ಶಾ ಭೇಟಿ ಬಗೆಗಿನ ಕುತೂಹಲವನ್ನು ಹೆಚ್ಚಿಸಿದ್ದವು.

ಅಸೆಂಬ್ಲಿ ಚುನಾವಣೆ ಸನಿಹದಲ್ಲಿರುವ ಕಾರಣ ರಾಜ್ಯ ಬಿಜೆಪಿ ಮತ್ತು ಸರ್ಕಾರದ ಮಟ್ಟದಲ್ಲಿ ಹಾಗೇ ಆಗಬಹುದು. ಹೀಗೆ ಆಗಬಹುದು ಎಂಬ ಸುದ್ದಿಗಳು ಹಬ್ಬಿದ್ವು. ಅದ್ರಲ್ಲೂ ಮುಖ್ಯಮಂತ್ರಿಗಳು ಎಲ್ಲಾ ಶಾಸಕರಿಗೆ ಆಯೋಜಿಸಿದ್ದ ಭೋಜನ ಕೂಟ ನಾನಾ ಮಾತುಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದ್ರೇ, ಸದ್ಯ ಈ ದಿನದ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಾಗಲಿ, ಸರ್ಕಾರದ ಮಟ್ಟದಲ್ಲಾಗಲಿ ಯಾವುದೇ ಬದಲಾವಣೆಗಳು ಆಗಿಲ್ಲ.

ಖಾಸಗಿ ಹೋಟೆಲ್‍ನಲ್ಲಿ ನಿಗದಿ ಆಗಿದ್ದ ಅಮಿತ್ ಶಾ ನೇತೃತ್ವದ ಎರಡು ಸಭೆಗಳು ಕೂಡ ದಿಢೀರ್ ಎಂದು ರದ್ದಾಗಿವೆ. ಭೋಜನಕೂಟವೂ ಕೇವಲ 15 ನಿಮಿಷದಲ್ಲಿ ಮುಗಿದಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಮತ್ತು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಜೊತೆ ಒಂದೇ ಟೇಬಲ್‍ನಲ್ಲಿ ಕುಳಿತು ಅಮಿತ್ ಶಾ ಊಟ ಮುಗಿಸಿದ್ದಾರೆ.

ಈ ಅವಧಿಯಲ್ಲೇ ಅಮಿತ್ ಶಾ ರಾಜ್ಯ ನಾಯಕರಿಗೆ ತಲುಪಿಸಬೇಕಾದ ಸಂದೇಶವನ್ನು ತಲುಪಿಸಿದ್ದಾರೆ. ಆದರೆ ಆ ಸಂದೇಶದ ಗುಟ್ಟು ರಟ್ಟಾಗಿಲ್ಲ. ಮೋದಿ ವಿದೇಶ ಪ್ರವಾಸ ಮುಗಿಸಿ ಬಂದ್ಮೇಲೆ ರಾಜ್ಯದಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ದೊಡ್ಡ ನಿರ್ಧಾರ ಪ್ರಕಟವಾಗುವ ಸಂಭವ ಇದೆ. ಭೋಜನಕೂಟದಲ್ಲಿ ಪಾಲ್ಗೊಂಡಿದ್ದ ಹಲವು ನಾಯಕರು, ಯಾವುದೇ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಜಾರಿಕೊಂಡ್ರು. ಇದನ್ನೂ ಓದಿ: ಮುಂದಿನ ಒಲಿಂಪಿಕ್‌ಗಳಲ್ಲಿ ಹೆಚ್ಚು ಪದಕ ಗೆಲ್ಲುವ ಗುರಿ ನಮ್ಮದಾಗಬೇಕು: ಕ್ರೀಡಾಪಟುಗಳಿಗೆ ಅಮಿತ್ ಶಾ ಕರೆ

ರಾಜ್ಯ ರಾಜಕೀಯದ ಬದಲಾವಣೆ ಚೆಂಡು ಸದ್ಯ ಪ್ರಧಾನಿ ಮೋದಿ ಅಂಗಳದಲ್ಲಿದೆ. ಅವರು ಯಾವ ನಿರ್ಧಾರ ತೆಗೆದುಕೊಳ್ತಾರೋ ಎಂಬ ಕುತೂಹಲ ಹುಟ್ಟಿಕೊಂಡಿದೆ. ಆದರೆ ರಾಜ್ಯ ಬಿಜೆಪಿ ಸಂಘಟನೆಗೆ ಒತ್ತು, ಬಿಜೆಪಿಗೆ ಫೈರ್‍ಬ್ರ್ಯಾಂಡ್ ಅಧ್ಯಕ್ಷ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ಯುಪಿ ಮಾಡೆಲ್; ಮೂವರು ಡಿಸಿಎಂ, ಯುವ, ಹೊಸ ಮುಖಗಳಿಗೆ ಮಂತ್ರಿಗಿರಿ, ಮೂವರು ವಲಸಿಗರಿಗೆ ಕೊಕ್ ಮೊದ;ಆದ ವಿಚಾರಗಳ ಬಗ್ಗೆ ಚರ್ಚೆಯಾಗ್ತಿದೆ.

ರಾಜ್ಯ ಸರ್ಕಾರ ಮತ್ತು ಪಕ್ಷದಲ್ಲಿ ಭಾರೀ ಬದಲಾವಣೆಗಳು ಆಗಲಿವೆ ಎಂಬ ಗುಸುಗುಸು ನಡುವೆ ರಾಜಕಾರಣಿಗಳಿಂದ ಮಾತಿನ ಮತಾಪುಗಳು ಸಿಡಿದ್ವು. ಮೇ 10ರೊಳಗೆ ಸಿಎಂ ಬದಲಾಗಬಹುದು ಎಂದು ಯತ್ನಾಳ್ ಬಾಂಬ್ ಹಾಕಿದ್ರು. ಆದರೆ ಪಕ್ಷದ ಉಳಿದ ನಾಯಕರು ಸಿಎಂ ಬೊಮ್ಮಾಯಿ ಪರವೇ ಬ್ಯಾಟ್ ಬೀಸಿದ್ರು. ಆದಷ್ಟು ಬೇಗ ಸಂಪುಟ ಸರ್ಜರಿ ಆಗಬಹುದು. ನಾಯಕತ್ವ ಬದಲಾವಣೆ ಅನ್ನೋದೆಲ್ಲಾ ಊಹಾಪೋಹ ಎಂದು ಬಿಎಸ್‍ವೈ ಹೇಳಿದ್ರು. ಇದನ್ನೂ ಓದಿ: ಅಮಿತ್ ಶಾ ಐರನ್ ಮ್ಯಾನ್, ಹಿಡಿದ ಕೆಲಸ ಬಿಡೋದಿಲ್ಲ: ಅನುರಾಗ್ ಠಾಕೂರ್

ಅಶೋಕ್ ಕೂಡ ಯಾವ ಬದಲಾವಣೆಯೂ ಆಗಲ್ಲ. ಹಗಲುಗನಸು ಕಾಣಬೇಡಿ ಅಂದ್ರು. ನಾಯಕತ್ವ ಬದಲಾವಣೆ ಕಪೋಲಕಲ್ಪಿತ ಎಂದು ಅರುಣ್ ಸಿಂಗ್ ಹೇಳಿದ್ರು. ಭ್ರಮೆಲಿ ಇರೋರು ಮೊದಲು ಹೊರಬನ್ನಿ ಎಂದು ಕಟೀಲ್ ಎಚ್ಚರಿಸಿದ್ರು. ನಾನು ಸಂಪುಟ ಸೇರೋಕೆ ಅಂತಾ ಕೆಲಸ ಮಾಡ್ತಿಲ್ಲ ಎಂದು ವಿಜಯೇಂದ್ರ ಹೇಳಿಕೊಂಡ್ರು. ಡಿಕೆಶಿಯಂತೂ ನೀವೇನಾದ್ರೂ ಮಾಡ್ಕೊಳ್ರಪ್ಪ.. ಆದ್ರೆ ಜನತೆಗೆ ಒಳ್ಳೆ ಆಡಳಿತ ನೀಡಿ ಅಂತಾ ಸಲಹೆ ನೀಡಿದ್ರು.

Share This Article
Leave a Comment

Leave a Reply

Your email address will not be published. Required fields are marked *