ರಕ್ತದಾನ ಮಾಡಿ ಇನ್ನೊಬ್ಬರಿಗೆ ಬೆಳಕಾಗಿ: ಜಯರಾಮ್ ರಾಯಪುರ್

Public TV
2 Min Read

ಬೆಂಗಳೂರು: ಕರ್ನಾಟಕ ವಿದ್ಯಾರ್ಥಿ ಕೂಟ ಟ್ರಸ್ಟ್‌ ಬೆಂಗಳೂರು ಮತ್ತು ಭಾರತ್‌ ವಿದ್ಯಾ ಸಂಸ್ಥೆ, ಜಯನಗರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿ ದಿನಾಚರಣೆಯನ್ನು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯಪುರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಯುಗದಲ್ಲಿ ರಕ್ತದಾನಿಗಳ ಸಂಖ್ಯೆ ಬಹಳ ವಿರಳವಾಗುತ್ತಿದೆ, ಇಂತಹ ನಿಟ್ಟಿನಲ್ಲಿ ಇಂದಿನ ಯುವ ಜನಾಂಗಕ್ಕೆ ಇದರ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ಅತ್ಯಗತ್ಯವಾಗಿದೆ ಎಂದರು.

ದೇಶದ ಯುವಕ/ ಯುವತಿಯರು ರಕ್ತದಾನಿಗಳಾಗಿ ಮುಂದೆ ಬಂದರೆ ಇನ್ನೊಂದು ಜೀವಕ್ಕೆ ಜೀವದಾನ ಮಾಡಿ, ಅವರ ಬದುಕಿಗೆ ಬೆಳಕಾಗಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯೋನ್ಮುಖ ವಾಗಬೇಕಾಗಿದೆ. ಜೊತೆಗೆ ಎಲ್ಲ ದಾನಗಳಿಗಿಂತಲು ರಕ್ತದಾನ ಬಹಳ ಪ್ರಮುಖವಾದದ್ದು ಎಂದು ಹೇಳಿದರು.

ಮನುಷ್ಯ ಹುಟ್ಟಿದಾಗಿನಿಂದಲು ಸಾಯುವವರೆಗು ತಮ್ಮ ಜೀವನದ ಸಾರ್ಥಕತೆ ಪಡೆಯಬೇಕಾದರೆ ಅವನ ಜೀವಿತಾವಧಿಯಲ್ಲಿ ಇನ್ನೊಬ್ಬರ ಬಾಳಿಗೆ ದಾರಿದೀಪವಾಗುವುದಕ್ಕೆ ನಾವುಗಳು ಅಂಗದಾನ, ದೇಹದಾನ ಮತ್ತು ರಕ್ತದಾನ ಮಾಡುವ ಮೂಲಕ ನಮ್ಮ ಜೀವನದ ಸಾರ್ಥಕತೆಯನ್ನು ಮೆರೆಯಬೇಕು ಎಂದರು. ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಕೂಡ ವಿಶ್ವ ರಕ್ತದಾನಿ ದಿನಾಚರಣೆ ಪ್ರಯುಕ್ತ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಕಾರ್ಯಕ್ರಮಕ್ಕೆ ಕಳಶಪ್ರಾಯರಾಗಿ ತಮ್ಮ ಜೀವನವನ್ನು ಸಮಾಜಮುಖಿಯಾಗಿ ಸಾಧನೆ ಮಾಡಿದ ಸಾಧಕರಿಗೆ ಕಾರ್ಲ್‌ ಲ್ಯಾಂಡ್‌ ಸ್ಟೇನರ್‌ ಹೆಸರಿನಲ್ಲಿ ನಮ್ಮ ಕರ್ನಾಟಕ ವಿದ್ಯಾರ್ಥಿ ಕೂಟ ಟ್ರಸ್ಟ್‌ ವತಿಯಿಂದ ಪ್ರಶಸ್ತಿ (ಕಾರ್ಲ್ ಲ್ಯಾಂಡ್ಸ್ಟೇನರ್ ಹೆಸರಿನಲ್ಲಿ) ಡಾ ಶಿವರಾಂ.ಸಿ – ಕನ್ಸಲ್ಟೆಂಟ್ ಬ್ಲಡ್ ಟ್ರಾನ್ಸ್ ಫ್ಯೂಜನ್ ಮೆಡಿಸನ್, WBC ಪ್ರಶಸ್ತಿ (ಮಹತ್ಮಾ ಗಾಂಧೀಜಿ ಹೆಸರಿನಲ್ಲಿ) ಡಾ ಬಸವರಾಜು ಹೆಚ್ ತಳವಾರ್ – ಬ್ಲಡ್ ಬ್ಯಾಂಕ್ ಮೆಡಿಕಲ್ ಆಫಿಸರ್ – ಹಾವೇರಿ , ರಕ್ತದಾನ ಸೇವಾ ಪ್ರಶಸ್ತಿ( ಡಾ. ರಾಜ್ ಕುಮಾರ್ ನೆನಪಿನಲ್ಲಿ) ಡಾ ಉಮಾ ದೇವಿ ಕೆ – ಬ್ಲಡ್ ಬ್ಯಾಂಕ್ ಮೆಡಿಕಲ್ ಆಫಿಸರ್ ಜಯದೇವ ಆಸ್ಪತ್ರೆ, ರಕ್ತದಾನ ಸೇವಾ ಪ್ರಶಸ್ತಿ( ಡಾ ಚಂದ್ರಮ್ಮ ಸಾಗರ್ ನೆನಪಿನಲ್ಲಿ) ಡಾ ಪೂರ್ಣಿಮಾ ಜೋಗಿ, ಅಸೋಸಿಯೇಟ್ ಪ್ರೋಫೆಸರ್ – ಸೆಂಟ್ ಫ್ರಾಂನ್ಸಿಸ್ ಕಾಲೇಜು, ವರ್ಷದ ರಕ್ತದಾನಿ ಪ್ರಶಸ್ತಿ ಶ್ರೀನಿವಾಸ್ ಮೂರ್ತಿ ವಿ , ವಿವೇಕ್. ಜಿ , ವಿದ್ಯಾರ್ಥಿ ರಕ್ತದಾನಿ ಪ್ರಶಸ್ತಿ ನವೀನ್ ಕುಮಾರ್ ವಿ. ಇಂತಹ ಮಹಾ ಸಾದಕರನ್ನು ನಮ್ಮ ಕರ್ನಾಟಕ ವಿಧ್ಯಾರ್ಥಿ ಕೂಟ ಟ್ರಸ್ಟ್‌ ವತಿಯಿಂದ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕೆ.ಆರ್. ನಿರ್ಮಲ್ ಕುಮಾರ್, ಬಿ.ಸಿ ಶಿವಲಿಂಗೇಗೌಡ, ಡಾ. ಬೈರಮಂಗಲ ರಾಮೇಗೌಡ, ದಿವ್ಯ ಕೆ ಮೂರ್ತಿ, ಹರ್ಷ ಎಲ್‌, ಪ್ರೊಫ್ ಎನ್ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

Share This Article