ಮದ್ಯದ ಜೊತೆಗೆ ನೀರಿನ ಬಾಟ್ಲಿಗೆ ನಡೆದ ಗಲಾಟೆ ಕ್ಯಾಶಿಯರ್ ಕೊಲೆಯಲ್ಲಿ ಅಂತ್ಯ

Public TV
1 Min Read

ಕೋಲಾರ: ಬಾರ್‌ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದಿದ್ದು, ಕ್ಯಾಶಿಯರ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಟೇಕಲ್ ಸರ್ಕಲ್‍ನಲ್ಲಿರುವ ಚಾಲುಕ್ಯ ಬಾರ್‌ನಲ್ಲಿ ನಡೆದಿದೆ.

ಚಾಲುಕ್ಯ ಬಾರ್ ಕ್ಯಾಶಿಯರ್ ಮೋಹನ್ (42) ಕೊಲೆಯಾದವರು. ನವೀದ್ ಬೇಗ್ ಹಾಗೂ ಆರೀಫ್ ಖಾನ್ ಎಂಬವರಿಂದ ಕೃತ್ಯ ನಡೆದಿದೆ. ಬಾರ್‌ನಲ್ಲಿ ಮದ್ಯದ ಜೊತೆಗೆ ನೀರಿನ ಪಾಕೆಟ್‍ಗಾಗಿ ಜಗಳ ಶುರುವಾಗಿತ್ತು. ಬಾರ್ ಎದುರು ನಡೆದ ಈ ಗಲಾಟೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಿರಿಯ ವಕೀಲರು ಕಾಂಗ್ರೆಸ್ ಸಂಸ್ಕೃತಿಯ ವ್ಯಕ್ತಿಯಲ್ಲ: ಕಪಿಲ್ ಸಿಬಲ್ ವಿರುದ್ಧ ಗೆಹ್ಲೋಟ್ ಕಿಡಿ

ಸ್ಥಳಕ್ಕೆ ಕೋಲಾರ ಠಾಣಾ ಪೊಲೀಸರು ಭೇಟಿ ನೀಡಿದ್ದು, ನಗರ ಠಾಣೆ ಪೊಲೀಸರಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯು ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಏಕಕಾಲದಲ್ಲಿ ಎಸಿಬಿ ದಾಳಿ

Share This Article
Leave a Comment

Leave a Reply

Your email address will not be published. Required fields are marked *