ಪ್ರೀತ್ಸೆ ಎಂದು ಮಹಿಳಾ ಪೇದೆ ಹಿಂದೆ ಬಿದ್ದ ಪಿಸಿ ವಿರುದ್ಧ ದೂರು ದಾಖಲು

Public TV
1 Min Read

ಬೆಂಗಳೂರು: ಪಿಸಿಯೊಬ್ಬ ಮಹಿಳಾ ಪೇದೆಗೆ ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಸಂತೋಷ್ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಪಾಗಲ್ ಪೇದೆ. ಸಂತೋಷ್ ಹಾಗೂ ಮಹಿಳಾ ಪೇದೆ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿದೆ. ಬಳಿಕ ಸಂತೋಷ್, ಮಹಿಳಾ ಪೇದೆಗೆ ಪ್ರಪೋಸ್ ಮಾಡಿದ್ದನು.

ಇವರಿಬ್ಬರ ಮದುವೆಗೆ ಸಂತೋಷ್ ಮನೆಯಲ್ಲಿ ಒಪ್ಪದಿದ್ದಾಗ ಮಹಿಳೆ ಆತನ ಜೊತೆ ಮಾತನಾಡುವುದನ್ನು ಬಿಟ್ಟಿದ್ದಳು. ಬಳಿಕ ಸಂತೋಷ್ ಪ್ರೀತಿಸುವಂತೆ ಮಹಿಳೆಗೆ ದುಂಬಾಲು ಬಿದ್ದಿದ್ದನು. ಇದರಿಂದ ಮನನೊಂದ ಮಹಿಳಾ ಪೇದೆ ಅಶೋಕ್‍ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.

ದೂರಿನಲ್ಲಿ ಏನಿದೆ?
ನಾನು ಆಟೋಮೆಷನ್(ಟಿಎಂಸಿ)ನಲ್ಲಿ ಪಿಸಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕೂ ಮೊದಲು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದೆ. ಇದೇ ಠಾಣೆಯಲ್ಲಿ ಸಂತೋಷ್ ಕುಮಾರ್ ಕೆಲಸ ಮಾಡುತ್ತಿದ್ದರು. ಒಂದು ದಿನ ಸಂತೋಷ್ ಅವರು ನನಗೆ ಪ್ರಪೋಸ್ ಮಾಡಿದ್ದರು. ನಾನು ಕೂಡ ಅವರ ಪ್ರೀತಿಯನ್ನು ಒಪ್ಪಿದೆ. ಬಳಿಕ ಸಂತೋಷ್ ಮನೆಯವರು ನಮ್ಮ ಪ್ರೀತಿಯನ್ನು ಒಪ್ಪದಿದ್ದಾಗ ನಾನು ಅವರ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದೆ.

ನಾನು ಮಾತನಾಡುವುದನ್ನು ನಿಲ್ಲಿಸಿದ್ದಕ್ಕೆ ಸಂತೋಷ್ ನಾನು ಕೆಲಸಕ್ಕೆ ಹೋಗುವಾಗ ಬರುವಾಗ ಹಿಂಬಾಲಿಸಿ ಮಾತನಾಡಿಸುತ್ತಿದ್ದು, ಬೆದರಿಕೆ ಕೂಡ ಹಾಕುತ್ತಿದ್ದಾರೆ. ಅಕ್ಟೊಬರ್ 3 ಹಾಗೂ 4ರಂದು ಸಂತೋಷ್ ನನ್ನ ಮನೆ ಬಳಿ ಕುಡಿದು ಬಂದು ಕೆಟ್ಟದಾಗಿ ನಿಂದಿಸಲು ಶುರು ಮಾಡಿದ್ದರು. ಅದಾದ ಬಳಿಕ ಮತ್ತೆ 5ರಂದು ಮನೆ ಬಳಿ ಬಂದು ಕೆಟ್ಟದಾಗಿ ನಿಂದಿಸಿದಲ್ಲದೇ ನನ್ನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ. ಹೀಗಾಗಿ ಸಂತೋಷ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಎಂದು ಮನವಿ ಮಾಡಿಕೊಳ್ಳುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *