ಬೈಕಿಗೆ ಕಾರ್ ಡಿಕ್ಕಿ- ಮಗಳ ವರ್ಗಾವಣೆ ಪತ್ರ ತರಲು ಹೋದ ವ್ಯಕ್ತಿ ಸ್ಥಳದಲ್ಲೇ ಸಾವು

Public TV
0 Min Read

ಹಾಸನ: ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಹೊರವಲಯದ ಕೆಂಚಟ್ಟಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ.

ಧರ್ಮಪ್ರಕಾಶ್ (55) ಮೃತ ದುರ್ದೈವಿ ಸವಾರ. ಧರ್ಮಪ್ರಕಾಶ್ ಅವರು ಮಗಳ ವರ್ಗಾವಣೆ ಪತ್ರ ತರಲೆಂದು ಎಚ್.ಕೆ.ಎಸ್ ಕಾಲೇಜಿಗೆ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ತಂದೆ ಜೊತೆಗೆ ತೆರಳಿದ್ದ ಪುತ್ರಿ ಪ್ರಿಯಾಂಕ ಅಪಾಯದಿಂದ ಪಾರಾಗಿದ್ದಾರೆ.

ಶಾಲೆ ಕಡೆಯಿಂದ ಪ್ರಮುಖ ರಸ್ತೆಗೆ ಬರುವ ವೇಳೆ ಬೆಂಗಳೂರು ಕಡೆಯಿಂದ ಬಂದ ಕಾರು, ಬೈಕ್ ಗೆ ಡಿಕ್ಕಿ ಹೊಡೆದಿದೆ.

ಹಾಸನ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *