ತುಮಕೂರಿನಲ್ಲಿ ಮರಕ್ಕೆ ಗುದ್ದಿದ ಕಾರ್- ಪತಿ ಸಾವು, ಪತ್ನಿಯ 2 ಕಾಲು ಕಟ್

Public TV
0 Min Read

ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಗುದ್ದಿದ ಪರಿಣಾಮ ಪತಿ ಸ್ಥಳದಲ್ಲೇ ಸಾವನ್ನಪ್ಪಿ, ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹುಳಿಯಾರಿನಲ್ಲಿ ಈ ಭೀಕರವಾದ ಅಪಘಾತ ಸಂಭವಿಸಿದೆ. ಹುಳಿಯಾರಿನ ಬಸವೇಶ್ವರ ಜ್ಯುವೆಲ್ಲರಿ ಮಾಲೀಕ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ಅವರ ಪತ್ನಿ ಸಂಧ್ಯಾ ಅವರ ಎರಡು ಕಾಲು ಮುರಿದಿವೆ.

ಶನಿವಾರ ಹೊಸದುರ್ಗಕ್ಕೆ ಸ್ನೇಹಿತನ ಮದುವೆ ಹೋಗಿ ವಾಪಸ್ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಸಂಬಂಧ ಕುರಿತು ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *