ಜೋರಾಗಿ ಸಂಗೀತವನ್ನು ಹಾಕದಂತೆ ಕೇಳಿದ್ದಕ್ಕೆ ಕೆನಡಾ ನಿವಾಸಿಯ ಕೊಲೆ

Public TV
1 Min Read

ಚಂಡೀಗಢ: ಕೆನಡಾ (Canada) ನಿವಾಸಿಯೊಬ್ಬ ಜೋರಾಗಿ ಸಂಗೀತವನ್ನು (Music) ಹಾಕದಂತೆ ಕೇಳಿದ್ದಕ್ಕೆ ಗುಂಪೊಂದು ಹತ್ಯೆಗೈದ ಘಟನೆ ಪಂಜಾಬ್‍ನ (Pubjab) ರೂಪನಗರ ಜಿಲ್ಲೆಯ ಆನಂದ್‍ಪುರ ಸಾಹಿಬ್ ಪ್ರದೇಶದಲ್ಲಿ ನಡೆದಿದೆ.

ಪ್ರದೀಪ್ ಸಿಂಗ್ (24) ಮೃತ ವ್ಯಕ್ತಿ. ಆದರೆ ಪ್ರದೀಪ್ ಸಿಂಗ್ ಕೆನಡಾದ ಪ್ರಜೆಯಾಗಿದ್ದು ಅಲ್ಲೇ ವಾಸಿಸುತ್ತಿದ್ದ. ಈ ವರ್ಷದ ಫೆಬ್ರವರಿಯಲ್ಲಿ ಪ್ರದೀಪ್ ಸಿಂಗ್ ಭಾರತಕ್ಕೆ ಬಂದಿದ್ದ. ಪ್ರದೀಪ್ ಸಿಂಗ್ ಪೋಷಕರಿಗೆ ಒಬ್ಬನೇ ಪುತ್ರನಾಗಿದ್ದು, ಈತ ತನ್ನ ಸ್ವಂತ ಊರಿಗೆ ಬಂದಿದ್ದ.

ನಿರಂಜನ್ ಸಿಂಗ್ ಹಾಗೂ ಇತರರು ವಾಹನದಲ್ಲಿ ತಿರುಗಾಡುತ್ತಿದ್ದರು. ಈ ವೇಳೆ ಆರೋಪಿಗಳು ದೊಡ್ಡದಾಗಿ ಹಾಡು ಹಾಕಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರದೀಪ್ ಹಾಡಿನ ಸೌಂಡ್‍ನ್ನು ಕಡಿಮೆ ಮಾಡಲು ತಿಳೀಸಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರದೀಪ್ ಮೇಲೆ ಆ ಗುಂಪು ಹಲ್ಲೆ ನಡೆಸಿದೆ.

ಘಟನೆ ವೇಳೆ ತೀವ್ರ ಗಾಯಗೊಂಡಿದ್ದ ಪ್ರದೀಪ್‍ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಫಾಸ್ಟ್ ಟ್ಯಾಗ್‌ನಲ್ಲಿ ಹಣವಿಲ್ಲದೇ ಟೋಲ್ ಬಳಿಯೇ ನಿಂತ‌ ಇವಿ ಬಸ್‌ಗಳು

ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವದಂತಿಗಳಿಗೆ ಯಾವುದೇ ಕಿವಿಗೊಡಬೇಡಿಮ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿನ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್

Share This Article
Leave a Comment

Leave a Reply

Your email address will not be published. Required fields are marked *