ಮಹದೇಶ್ವರ ಬೆಟ್ಟದಲ್ಲಿ ಕೊನೆಗೂ ಫಿಕ್ಸ್ ಆಯ್ತು ಕ್ಯಾಬಿನೆಟ್ ಮೀಟಿಂಗ್ – ಏ.24 ಕ್ಕೆ ಸಂಪುಟ ಸಭೆ

Public TV
1 Min Read

ಚಾಮರಾಜನಗರ: ಹನೂರಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ಕೊನೆಗೂ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಇದೇ ಏ.24 ರಂದು ಕ್ಯಾಬಿನೆಟ್ ಮೀಟಿಂಗ್ (Cabinet Meeting) ನಡೆಯಲಿದೆ.

ಮೂರು ಬಾರಿ ದಿನಾಂಕ ನಿಗದಿಯಾಗಿ ಸಚಿವ ಸಂಪುಟ ಸಭೆ ರದ್ದಾಗಿತ್ತು. ಏ.24 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಶಾಸಕ ಎಂ.ಆರ್.ಮಂಜುನಾಥ್ ಅವರು ಪೂರ್ವಭಾವಿ ಸಭೆ ನಡೆಸಿದ್ದಾರೆ. ಇದನ್ನೂ ಓದಿ: 136 ಸೀಟು ಬಂದ ಮೇಲೆ `ಕೈ’ ಸರ್ಕಾರಕ್ಕೆ ಕಾಮಾಲೆ ಕಣ್ಣು ಹಳದಿ ಎನ್ನುವಂತಾಗಿದೆ: ಬಿ.ಸಿ.ಪಾಟೀಲ್ ಕಿಡಿ

ದೀಪದ ಗಿರಿ ಒಡ್ಡುವಿನಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ದೀಪದಗಿರಿ ಒಡ್ಡುವಿಗೆ 50 ಕ್ಕೂ ಹೆಚ್ಚು ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ.

ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ಹಾಸನ, ಚಿಕ್ಕಮಗಳೂರು, ಮಂಗಳೂರು, ಉಡುಪಿ ಜಿಲ್ಲೆಯ ಕುರಿತು ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಇದನ್ನೂ ಓದಿ: ಮಗನನ್ನ ಸಿಎಂ ಮಾಡೋಕೆ ಖರ್ಗೆಯವರೇ ಸರ್ಕಾರ ಬೀಳಿಸುತ್ತಾರೆ: ಶ್ರೀರಾಮುಲು

Share This Article