ಗೆದ್ದವರಿಗೆ ಮಂತ್ರಿ ಮಾಡದೇ ಇದ್ದರೆ ರಾಜ್ಯಕ್ಕೆ ತಪ್ಪು ಸಂದೇಶ: ಶ್ರೀಮಂತ್ ಪಾಟೀಲ್

Public TV
2 Min Read

ಬೆಂಗಳೂರು : ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. 10 ಜನರಿಗೆ ಮಾತ್ರ ಮಂತ್ರಿ ಸ್ಥಾನ ಅನ್ನೋ ಸಿಎಂ ಮಾತಿಗೆ ಮಿತ್ರ ಮಂಡಳಿ ಶಾಸಕರು ಪರೋಕ್ಷವಾಗಿ ವಿರೋಧ ಮಾಡ್ತಿದ್ದು, ವಚನ ಭ್ರಷ್ಟತೆಯ ಅಸ್ತ್ರ ಹೂಡುತ್ತಿದ್ದಾರೆ. ಮತ್ತೊಬ್ಬ ಅರ್ಹ ಶಾಸಕ ಶ್ರೀಮಂತ್ ಪಾಟೀಲ್ ಗೆದ್ದವರಿಗೆ ಮಂತ್ರಿ ಸ್ಥಾನ ಕೊಡದೇ ಇದ್ದರೆ ವಚನ ಭ್ರಷ್ಟತೆ ಆಗುತ್ತೆ ಅಂತ ಸಿಎಂಗೆ ಎಚ್ಚರಿಸಿದ್ದಾರೆ.

ಸಂಪುಟ ವಿಸ್ತರಣೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಇನ್ನು ಅಧಿಕೃತವಾಗಿ ಸಚಿವ ಸ್ಥಾನದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ಮಾಧ್ಯಮಗಳ ಮೂಲಕವೇ ನನ್ನ ಹೆಸರು ಇದೆ ಅಂತ ತಿಳಿದುಕೊಂಡಿದ್ದೇನೆ. ಗೆದ್ದ 11 ಶಾಸಕರಿಗೂ ಮಂತ್ರಿ ಸ್ಥಾನ ಕೊಡ್ತೀನಿ ಅಂತ ಸಿಎಂ ಹೇಳಿದ್ರು. 11 ಜನರಿಗೂ ಮಂತ್ರಿ ಸ್ಥಾನ ಕೊಡೋ ವಿಶ್ವಾಸ ಇದೆ. ಸಿಎಂ ಕೂಡಾ ಮಾತು ಕೊಟ್ಟಿದ್ದಾರೆ. 11 ಜನರಿಗೆ ಕೊಟ್ಟರೆ ಮಾತ್ರ ಮಾತು ಉಳಿಸಿಕೊಂಡಂತೆ ಆಗುತ್ತೆ. ಇಲ್ಲ ಅಂದ್ರೆ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತೆ ಅಂತ ತಿಳಿಸಿದ್ರು.

ಇನ್ನು ಮಹೇಶ್ ಕುಮಟಳ್ಳಿಗೆ ಸ್ಥಾನ ತಪ್ಪುವ ವಿಚಾರ ನನಗೆ ಗೊತ್ತಿಲ್ಲ. 40 ಸಾವಿರ ಜನರ ಮುಂದೆ ಸಿಎಂ ಮಾತು ಕೊಟ್ಟಿದ್ದಾರೆ. ನನಗೂ ಸಿಎಂ ಮಾತು ಕೊಟ್ಟಿದ್ದಾರೆ. ಹೀಗಾಗಿ ಮಂತ್ರಿ ಮಾಡೋ ಭರವಸೆ ಇದೆ ಅಂತ ತಿಳಿಸಿದ್ರು. ಮಹೇಶ್ ಕುಮಟಳ್ಳಿಗೆ ನಿಗಮ-ಮಂಡಳಿ ಸ್ಥಾನ ನೀಡೋ ವಿಚಾರ ನನಗೆ ಗೊತ್ತಿಲ್ಲ. ಗೆದ್ದ ಎಲ್ಲರಿಗೂ ಮಂತ್ರಿ ಮಾಡ್ತೀನಿ ಅಂತ ಸಿಎಂ ಹೇಳಿದ್ರು. ಮಹೇಶ್ ಕುಮಟಳ್ಳಿ ಸ್ಥಾನದ ವಿಚಾರ ಹೈಕಮಾಂಡ್ ನಿರ್ಧಾರ ಮಾಡಿರಬೇಕು. ಇದೊಂದು ರಾಷ್ಟ್ರೀಯ ಪಕ್ಷ. ಅವರು ಏನೇ ನಿರ್ಧಾರ ತೆಗೆದುಕೊಂಡ್ರು ಅದಕ್ಕೆ ನಾವು ಬದ್ಧರಾಗಿರಬೇಕು ಅಂತ ತಿಳಿಸಿದರು. ನಾವು ಕೂಡಾ ಸಿಎಂಗೆ ಭೇಟಿ ಮಾಡಿ ಕುಮಟಳ್ಳಿಗೆ ಸಚಿವ ಸ್ಥಾನ ಕೊಡಿ ಅಂತ ಮನವಿ ಮಾಡುತ್ತೇವೆ. ಇದೇ ವೇಳೆ ಸೋತ ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್ ಗೂ ಸ್ಥಾನ ಕೊಡಬೇಕು. ಅವರು ಕೂಡಾ ತ್ಯಾಗ ಮಾಡಿದ್ದಾರೆ. ನಾವು ಸಿಎಂ ಭೇಟಿ ಮಾಡಿ ಅವರಿಗೆ ಸ್ಥಾನ ಕೊಡಿ ಅಂತ ಮನವಿ ಮಾಡ್ತೀವಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *