ಸಂಪುಟ ವಿಸ್ತರಣೆ- ಸಿಎಂಗೆ ಪರಮೋಚ್ಛ ಅಧಿಕಾರ: ಸುಧಾಕರ್

Public TV
1 Min Read

ಚಿಕ್ಕಬಳ್ಳಾಪುರ: ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಯಡಿಯೂರಪ್ಪನವರ ಪರಮೋಚ್ಛ ಅಧಿಕಾರ ಎಂದು ಶಾಸಕ ಡಾ.ಕೆ ಸುಧಾಕರ್ ಹೇಳಿದರು.

ನಗರದಲ್ಲಿ ಮಾತನಾಡಿದ ಸುಧಾಕರ್, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ಹೇಳಿಕೆ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಬೇರೆಯವರು ಮಾತನಾಡದಿದ್ದರೆ ಒಳ್ಳೆಯದು. ನಾನು ಸಹ ಆ ವಿಚಾರದಲ್ಲಿ ಮಾತನಾಡದಿರುವುದೇ ಒಳ್ಳೆಯದು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೇಳಿಕೆ ಕೊಡಲು ಸಿಎಂಗೆ ಮಾತ್ರ ಅರ್ಹತೆಯಿದೆ ಎಂದರು.

ರಾಜ್ಯ ಬಿಜೆಪಿ ಸರ್ಕಾರ ಒಳ್ಳೆಯ ಆಡಳಿತ ಕೊಡುತ್ತಿದೆ. ಪ್ರವಾಸೋದ್ಯಮ ಸಚಿವರಾಗಿ ಸಿಟಿ ರವಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದು, ಅವರು ಅದರ ಬಗ್ಗೆ ಗಮನ ಕೊಡಲಿ ಎಂದರು. ಎಲ್ಲರೂ ಸೇರಿ ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡೋಣ. ಯಾರೂ ಕೂಡ ಗೊಂದಲ ನಿರ್ಮಾಣ ಮಾಡುವಂತಹ ಹೇಳಿಕೆ ಕೊಡದೆ ಇರುವುದು ಒಳ್ಳೆಯದು ಎಂದು ಸುಧಾಕರ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *