ಸಿದ್ದುಗೆ ‘ಕೈ’ ಕೊಟ್ಟು ಬಿಜೆಪಿಗೆ ವಿಜಯ್‍ಶಂಕರ್ ಜಂಪ್?

Public TV
1 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮತ್ತೆ ಕಾಂಗ್ರೆಸ್‍ಗೆ ಕೈ ಕೊಡುವುದು ಪಕ್ಕಾ ಆಗಿದೆ.

ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದ ಸಿ.ಹೆಚ್ ವಿಜಯ್ ಶಂಕರ್ ಈಗ ಬಿಜೆಪಿ ಕಡೆ ವಾಲುತ್ತಿದ್ದಾರೆ.

ಶುಕ್ರವಾರ ಮೈಸೂರಿನ ಹುಣಸೂರಲ್ಲಿ ವಿಜಯ್ ಶಂಕರ್ ಕಾರ್ಯಕರ್ತರ ಸಭೆ ನಡೆಸಿದರು. ಈ ವೇಳೆ ಕಾಂಗ್ರೆಸ್ಸಿನಲ್ಲಿ ರಾಜಕೀಯ ಕಷ್ಟ ಆಗುತ್ತಿರುವುದರಿಂದ ಸರಿಯಾದ ನಿರ್ಧಾರ ಕೈಗೊಳ್ಳಬೇಕಿದೆ ಅಂತ ಹೇಳಿದ್ದಾರೆ. ಈ ಮೂಲಕ ವಿಜಯ್ ಶಂಕರ್ ಅವರು ಉಪ ಚುನಾವಣೆಗೂ ಮೊದಲೇ ಕಮಲ ಮುಡಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಜಯ್ ಶಂಕರ್ ಬಿಜೆಪಿಗೆ ಹೋಗ್ತಿರೋದು ಇದೇ ಮೊದಲಲ್ಲ. 1991ರಲ್ಲಿ ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ್ದ ವಿಜಯಶಂಕರ್ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಆದರೆ 2 ವರ್ಷಗಳ ಹಿಂದೆಯಷ್ಟೇ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *