ನಾಳೆಯಿಂದ ಸುಮಲತಾ ಪರ ಡಿಬಾಸ್ ಪ್ರಚಾರ

Public TV
1 Min Read

ಮಂಡ್ಯ: ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋಮವಾರದಿಂದ ಮಂಡ್ಯದಲ್ಲಿ ಪ್ರಚಾರ ಆರಂಭಿಸಲಿದ್ದಾರೆ.

ಲೋಕಸಮರದ ಅಖಾಡಕ್ಕೆ ಸುಮಲತಾ ಪರ ಡಿಬಾಸ್ ಅಬ್ಬರದ ಪ್ರಚಾರ ನಡೆಸಲಿದ್ದು, ಏಪ್ರಿಲ್ 2ರಿಂದ ರಾಕಿಂಗ್ ಸ್ಟಾರ್ ಯಶ್ ಕೂಡ ಸಾಥ್ ನೀಡಲಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಾಳೆ ಬೆಳಗ್ಗೆ 9 ಗಂಟೆಗೆ ಕೆಆರ್‍ಎಸ್‍ನ ಅರಳಿಕಟ್ಟೆ ಸರ್ಕಲ್‍ನಿಂದ ದರ್ಶನ್ ಪ್ರಚಾರ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿಲ್ಲೆಯ ಹುಲಿಕೆರೆ, ಬೆಳಗೊಳ, ಮಂಟಿ, ಮೊಗರಹಳ್ಳಿ, ಪಂಪ್ಹೌಸ್.ಹೊಸಹಳ್ಳಿ, ಆನಂದೂರು, ಪಾಲಹಳ್ಳಿ, ನಗುವನಹಳ್ಳಿ, ಚಂದಗಾಲು, ಹೊಸೂರು, ಮೇಳಾಪುರ, ಹೆಬ್ಬಾಡಿಹುಂಡಿ, ಹೆಬ್ಬಾಡಿ, ಚಿಕ್ಕಅಂಕನಹಳ್ಳಿ, ಹಂಪಾಪುರ, ಹುರುಳಿಕ್ಯಾತನಹಳ್ಳಿ, ತರೀಪುರ, ಚನ್ನಹಳ್ಳಿ ಬಿದರಹಳ್ಳಿ, ಮಹದೇವಪುರ, ಮಂಡ್ಯಕೊಪ್ಪಲು, ಚಿಂದೇಗೌಡನಕೊಪ್ಪಲು, ಅರಕೆರೆ, ತಡಗವಾಡಿ, ಕೊಡಿಯಾಲ ಗ್ರಾಮಗಳಲ್ಲಿ ದರ್ಶನ್ ಅವರು ಸುಮಲತಾ ಜೊತೆಗೂಡಿ ಭರ್ಜರಿ ಪ್ರಚಾರ ಮಾಡಲಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *