ಬ್ರೀಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ಬಿಎಸ್‍ವೈ ತರಾಟೆ

Public TV
1 Min Read

ಬೀದರ್: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬ್ರೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿರ್ದೇಶಕ ಡಾ. ಚನ್ನಣ್ಣ ಅವರಿಗೆ ಆಸ್ಪತ್ರೆಯ ಅವ್ಯವಸ್ಥೆ ನೋಡಿ, ನಡೆಸಲು ಸಾಧ್ಯವಿಲ್ಲಿದ್ದರೆ ಆಸ್ಪತ್ರೆಗೆ ಬೀಗ ಹಾಕಿ. ನನ್ನ ಜೀವನದಲ್ಲಿ ಇಂಥಾ ಆಸ್ಪತ್ರೆ ನೋಡಿಲ್ಲ ಎಂದು ಬಿಎಸ್‍ವೈ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರೋ, ಸತ್ತಿದ್ದಾರೋ ಗೊತ್ತಿಲ್ಲಾ. ನಾವು ಈ ಆಸ್ಪತ್ರೆಗೆ ಬಂದ್ರೆ ಬೇರೆ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಇಲ್ಲಿದೆ. ನನ್ನ ಜೀವನದಲ್ಲಿ ಈ ರೀತಿಯ ದುಸ್ಥಿತಿ ಆಸ್ಪತ್ರೆ ನೋಡಿಲ್ಲ ಎಂದು ಹೇಳಿ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಆಸ್ಪತ್ರೆಯನ್ನು ಯಾವ ಪದದಿಂದ ವರ್ಣನೆ ಮಾಡಬೇಕೋ ಗೊತ್ತಿಲ್ಲ. ಇಲ್ಲಿದ್ದರೆ ನನ್ನ ಆರೋಗ್ಯ ಎಲ್ಲಿ ಕೆಡುತ್ತದೋ ಎಂದು ನಾನು ಬೇಗ ವೀಕ್ಷಣೆ ಮಾಡಿ ಹೊರ ಬಂದೆ ಎಂದು ಬಿಎಸ್‍ವೈ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *