ಬಿಎಸ್‍ವೈ, ಶೋಭಾ ಕರಂದ್ಲಾಜೆ ಇಲ್ಲಿ ವೀರಾವೇಶದಿಂದ ಮಾತಾಡ್ತಾರೆ, ಡೆಲ್ಲಿಯಲ್ಲಿ ವಾಯ್ಸೇ ಇರಲ್ಲ: ಹೆಚ್‍ಡಿಕೆ

Public TV
1 Min Read

ಚಿಕ್ಕಮಗಳೂರು: ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಇಲ್ಲಿ ಮಾತನಾಡುವಾಗ ಏನೋ ವಿರಾವೇಶದಿಂದ ಮಾತನಾಡ್ತಾರೆ. ಅದೇ ದೆಹಲಿಯಲ್ಲಿ ವಾಯ್ಸೆ ಹೊರಡಲ್ಲ ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಖಾಸಗಿ ಕಾರ್ಯನಿಮಿತ್ತ ಚಿಕ್ಕಮಗಳೂರಿನ ಕೊಪ್ಪಾಗೆ ಬಂದಿದ್ದ ಹೆಚ್‍ಡಿಕೆ ಮಾಧ್ಯಮದೊಂದಿಗೆ ಮಾತನಾಡಿ, ಬಿಎಸ್‍ವೈ ಹಾಗೂ ಶೋಭಾ ಕರಂದ್ಲಾಜೆ ವೀರಾವೇಶದಿಂದ ಮಾತನಾಡಬೇಕಾಗಿರೋದು ಇಲ್ಲಲ್ಲ. ನರೇಂದ್ರ ಮೋದಿ ಎದುರು ಮಾತನಾಡಿ ಅಂದ್ರು.

ಇಲ್ಲಿ ಮಾತನಾಡುವಾಗ ಏನೋ ವಿರಾವೇಶದಿಂದ ಮಾತನಾಡ್ತಾರೆ. ಅದೇ ದೆಹಲಿಯಲ್ಲಿ ವಾಯ್ಸೆ ಹೊರಡಲ್ಲ. ನಾನು ಕಣ್ಣಾರೆ ನೋಡಿದ್ದೇನೆ. ಮಹಾದಾಯಿ ಹಾಗೂ ಕಾವೇರಿ ನೀರಿನ ವಿಚಾರವಾಗಿ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಿದ್ರು. ಅವರ ಮುಂದೆ ಇವರ್ಯಾರೂ ಉಸಿರೇ ತೆಗೆಯೋದಿಲ್ಲ. ಆದ್ರೆ ಇಲ್ಲಿ ವೀರಾವೇಶದ ಭಾಷಣ ಎಂದು ವ್ಯಂಗ್ಯವಾಡಿದ್ರು.

ಮಾಧ್ಯಮದವರೊಂದಿಗೆ ಮಾತನಾಡಿದ ಬಳಿಕ ಹೆಚ್‍ಡಿಕೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದೇ ಹೇಳಲಾಗ್ತಿರೋ ಮಾಜಿ ಸಚಿವ ದಿವಂಗತ ಗೋವಿಂದೇ ಗೌಡರ ಪುತ್ರ ವೆಂಕಟೇಶ್‍ರವರೊಂದಿಗೆ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *