ಇಂದು ಮಲ್ಲೇಶ್ವರಂ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗ್ತಾರಾ ಬಿಎಸ್‍ವೈ

Public TV
1 Min Read

ಬೆಂಗಳೂರು: ಈಶ್ವರಪ್ಪ ಪಿಎ ವಿನಯ್ ಕಿಡ್ನ್ಯಾಪ್ ಯತ್ನ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ಮಲ್ಲೇಶ್ವರಂ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

ಜುಲೈ 15ರಂದು ಸಂತೋಷ್‍ಗಾಗಿ ತಮ್ಮ ಮನೆಯ ಶೋಧ ನಡೆಸಲಾಗಿದೆ. ಆದ್ರೆ ಸಂತೋಷ್ ನಿರಪರಾಧಿ. ಆತನನ್ನ ವಿನಾಕಾರಣ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ನಗರ ಕಮಿಷನರ್‍ಗೆ ಬಿಎಸ್‍ವೈ ಜುಲೈ 17ರಂದು ಪತ್ರ ಬರೆದಿದ್ರು. ಈ ಹಿನ್ನೆಲೆಯಲ್ಲಿ ಬಿಎಸ್‍ವೈಗೆ ಶುಕ್ರವಾರ ನೊಟೀಸ್ ಜಾರಿ ಮಾಡಲಾಗಿತ್ತು.

ಆದ್ರೆ ಬಿಎಸ್‍ವೈಗೆ ಇವತ್ತು ಉತ್ತರ ಕರ್ನಾಟಕ ಪ್ರವಾಸ ಫಿಕ್ಸ್ ಆಗಿದ್ದು ವಿಚಾರಣೆಗೆ ಹಾಜರಾಗೋದು ಅನುಮಾನ ಎನ್ನಲಾಗ್ತಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ವಿನಯ್‍ರನ್ನ ಸಹ ವಿಚಾರಣೆಗೆ ಎಸಿಪಿ ಕರೆದಿದ್ದಾರೆ. ಈ ನಡುವೆ ಇದೇ ಪ್ರಕರಣ ಸಂಬಂಧ ಎಫ್‍ಐಆರ್ ರದ್ದತಿ ಕೋರಿ ಸಂತೋಷ್ ಸಲ್ಲಿಸಿದ್ದ ಅರ್ಜಿ ಸಂಬಂಧ ಇಂದೇ ಹೈಕೋರ್ಟ್ ಆದೇಶ ನೀಡುವ ನಿರೀಕ್ಷೆಯಿದೆ.

Share This Article
Leave a Comment

Leave a Reply

Your email address will not be published. Required fields are marked *