ಬೀದರ್‍ನಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ – ಲಾರಿ ಹೊಡೆತಕ್ಕೆ ಕಾರು ಚಿಂದಿ

Public TV
1 Min Read

ಬೀದರ್: ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮುಂಬೈ ಮೂಲದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 9 ಸಸ್ತಾಪುರು ಬಂಗ್ಲಾ ಬಳಿ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ. ಮಯೂರ ಚಾವ್ಲಾ, ಜಿನಲ್ ಚಾವ್ಲಾ, ಭಾರತಿ ಚಾವ್ಲಾ, ಖಯಾಬ್ ಚಾವ್ಲಾ ಮತ್ತು ಕಾರು ಚಾಲಕ ಸುನೀಲ್ ಮೃತ ದುರ್ದೈವಿಗಳು. ಮುಂಬೈನ ನಯಿಬ್‍ನಿಂದ ಹೈದ್ರಾಬಾದ್ ಗೆ ತರಳುತ್ತಿರುವಾಗ ಈ ದುರ್ಘಟನೆ ನಡದಿದೆ.

8 ವರ್ಷದ ತ್ರಿಶಾ ಎಂಬ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಹೈದ್ರಾಬಾದ್‍ನ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಎಸ್.ಪಿ ಪ್ರಕಾಶ್ ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *