ಯಾರಿಗಾದರೂ ತಿಳಿಸಿದ್ರೆ ಜೀವ ಸಹಿತ ಬಿಡಲ್ಲ- ಅಣ್ಣನಿಂದಲೇ ತಂಗಿ ಮೇಲೆ ರೇಪ್

Public TV
1 Min Read

ಯಾದಗಿರಿ: ಸೀತಾಫಲ ಹಣ್ಣು ತರಲು ಹೋಗೋಣ ಎಂದು ಕರೆದುಕೊಂಡು ಹೋಗಿ ಅಣ್ಣನೆ ತಂಗಿ ಮೇಲೆ ಅತ್ಯಾಚಾರ ಮಾಡಿದ್ದು, ಅಲ್ಲದೇ ಯಾರಿಗಾದರೂ ತಿಳಿಸಿದ್ರೆ ಜೀವ ಸಹಿತ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಇದೇ ಅ.4 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಯ ನಿವಾಸಿಯಾಗಿದ್ದು, ಅದೇ ಗ್ರಾಮ ನಿವಾಸಿ ಚಿಕ್ಕಪ್ಪನ ಮಗಳ ಮೇಲೆ ಅತ್ಯಾಚಾರ ವ್ಯಸಗಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ:  ಜೆಡಿಎಸ್ ಅನ್ನು ರಾಜಕೀಯವಾಗಿ 1 ಕಿ.ಮೀ, 1 ಮೀಟರ್ ದೂರ ಇಡಬೇಕು: ಪ್ರೀತಂಗೌಡ

ಅ.4 ರಂದು ಸಂತ್ರಸ್ತೆಯನ್ನು ತನ್ನ ಗ್ರಾಮದಿಂದ ಸುರಪುರಕ್ಕೆ ಕರೆದುಕೊಂಡು ಬಂದ ಆರೋಪಿ, ಬಳಿಕ ಸಂತ್ರಸ್ತೆಗೆ ಸುಳ್ಳು ಹೇಳಿ ಗೋಗಿ ಪೊಲೀಸ್ ಠಾಣೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ, ವಿಷಯ ಯಾರಿಗಾದರೂ ತಿಳಿಸಿದ್ರೆ ಜೀವ ಸಹಿತ ಬಿಡುವುದಿಲ್ಲ ಎಂದು ಸಂತ್ರಸ್ತೆಗೆ ಜೀವ ಭಯ ಸಹ ಹಾಕಿದ್ದಾನೆ.

ಈ ಪ್ರಕರಣ ಕುರಿತು ನಿನ್ನೆ ಗೋಗಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯಿಂದ ದೂರು ದಾಖಲಾಗಿದೆ. ಸದ್ಯ ಅತ್ಯಾಚಾರ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸೆಕ್ಷನ್ 376(ಅತ್ಯಾಚಾರ) ಮತ್ತು 506(ಕ್ರಿಮಿನಲ್ ಬೆದರಿಕೆ) ಅಡಿ ಕೇಸ್ ದಾಖಲಾಗಿದೆ. ಇದನ್ನೂ ಓದಿ:  ಪೋಲಿಪುಂಡರ ಹಾವಳಿ ತಪ್ಪಿಸಿ – ಶಾಸಕರನ್ನು ತಡೆದು ಮನವಿ ನೀಡಿದ ವಿದ್ಯಾರ್ಥಿನಿಯರು

Share This Article
Leave a Comment

Leave a Reply

Your email address will not be published. Required fields are marked *