ಅತ್ತಿಗೆಯನ್ನ ಪತ್ನಿಯಾಗಿ ನೋಡಲು ಇಚ್ಚಿಸಿದ ಬಾಮೈದನ ರುಂಡವೇ ಕಟ್!

Public TV
1 Min Read

ಲಕ್ನೋ: ವ್ಯಕ್ತಿಯೊಬ್ಬ ತನ್ನ ಅತ್ತಿಗೆಯ ಮೇಲೆ ಕಣ್ಣಾಕಿದ್ದು, ಕೊನೆಗೆ ಅಣ್ಣ ಮತ್ತು ಆತನ ಸ್ನೇಹಿತರಿಂದಲೇ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಜನೋರ್ ನಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ ಬಿಜನೋರ್ ತೋಟವೊಂದರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದರು. ಮೃತ ವ್ಯಕ್ತಿಯನ್ನು ಕಮಿಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಕಮಿಲ್ ತನ್ನ ಅತ್ತಿಗೆಯನ್ನು ಪತ್ನಿಯಾಗಿ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದ. ಒಂದೆರೆಡು ಬಾರಿ ಅತ್ತಿಗೆ ಮೇಲೆ ಬಲತ್ಕಾರ ಸಹ ಮಾಡಿದ್ದನು. ಬಾಮೈದನ ಕಿರುಕುಳ ಹೆಚ್ಚಾಗುತ್ತಿದ್ದಂತೆ ಮಹಿಳೆ ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಪತಿ ದಿಲ್‍ಶಾದ್‍ಗೆ ತಿಳಿಸಿದ್ದಾಳೆ. ಈ ಸಂಬಂಧ ಕಮಿಲ್ ಮತ್ತು ಆತನ ಅಣ್ಣನ ನಡುವೆ ಜಗಳ ಸಹ ನಡೆದಿದೆ. ತಮ್ಮನ ಅತಿರೇಕ ಹೆಚ್ಚಾಗುತ್ತಿದ್ದಂತೆ ದಿಲ್‍ಶಾದ್ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಕೊಲೆಯ ಸಂಚು ರೂಪಿಸಿದ್ದಾನೆ. ಪತಿಯ ಸಂಚಿಗೆ ಪತ್ನಿ ಸಹ ಸಾಥ್ ನೀಡಿದ್ದಾಳೆ.

ದಿಲ್‍ಶಾದ್ ತನ್ನ ಸ್ನೇಹಿತರೊಂದಿಗೆ ಕೆಲವು ದಿನಗಳ ಹಿಂದೆ ಕಮಿಲ್ ನ ಕತ್ತು ಕತ್ತರಿಸಿ ಕೊಲೆ ಮಾಡಿ ಸಮೀಪದ ಖಾಲಿ ಜಮೀನಿನಲ್ಲಿ ಶವ ಬಿಸಾಡಿದ್ದರು. ಶವ ಪತ್ತೆಯಾದ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡು ಘಟನೆಯನ್ನು ವಿವರಿಸಿದ್ದಾರೆ. ದಿಲ್‍ಶಾದ್, ಆತನ ಪತ್ನಿ ಮತ್ತು ಓರ್ವನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದು, ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಎಸ್.ಪಿ ಸಂಜೀವ್ ತ್ಯಾಗಿ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *