ತಂಗಿಯನ್ನು ಪ್ರೀತಿಸಿದ್ದಕ್ಕೆ ಪ್ರಿಯಕರನ ಕಡಿದು ಕೊಲೆ

Public TV
1 Min Read

ಮಂಗಳೂರು: ತಂಗಿಯನ್ನು ಪ್ರೀತಿಸಿದ್ದಕ್ಕೆ ಪ್ರಿಯಕರನನ್ನು ಕಡಿದು ಕೊಲೆ ಮಾಡಿದ ಘಟನೆ ಮಂಗಳೂರಿನ ಕಾವೂರು ಬಳಿಯ ಪಂಜಿಮೊಗರಿನಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ರಾಕೇಶ್(26) ಕೊಲೆಯಾದ ಯುವಕ. ರಾಕೇಶ್ ಪಂಜಿಮೊಗರು ನಿವಾಸಿಯಾಗಿದ್ದು, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ರಾಕೇಶ್ ತನ್ನ ಪ್ರೀತಿ ಬಗ್ಗೆ ಮಾತನಾಡಲು ಯುವತಿಯನ್ನು ಕರೆದಿದ್ದನು. ಈ ವಿಷಯ ಆಕೆಯ ಸಹೋದರ ಸುನೀಲ್(28) ಗೆ ಗೊತ್ತಾಗಿದೆ.

ರಾಕೇಶ್ ಯುವತಿಯನ್ನು ಕರೆದ ಸ್ಥಳಕ್ಕೆ ಸುನೀಲ್ ತನ್ನ ತಂಡದ ಜೊತೆ ಹೋಗಿ ಆತನನ್ನು ಕೊಲೆ ಮಾಡಿದ್ದಾನೆ. ರಾಕೇಶ್ ಬರುತ್ತಿದ್ದಂತೆ ಸುನೀಲ್ ಹಾಗೂ ಆತನ ತಂಡ ಮಾರಕಾಸ್ತ್ರದಿಂದ ಕಡಿದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *