ಮಧ್ಯರಾತ್ರಿ ಮನೆಯ ಮುಂದೆ ಕುಳಿತಿದ್ದ ಅಣ್ಣನಿಗೆ ಚಾಕು ಇರಿದ ತಮ್ಮ

Public TV
1 Min Read

ಚಾಮರಾಜನಗರ: ಗಾಂಜಾ ಮತ್ತಿನಲ್ಲಿ ಸಹೋದರನನ್ನು ತಮ್ಮ ಕೊಲೆಗೈದ ಘಟನೆ ತಡರಾತ್ರಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ.

ಸಿದ್ದಪ್ಪ ಸ್ವಾಮಿ (42) ಕೊಲೆಯಾದ ವ್ಯಕ್ತಿ. ಮಧುವನಹಳ್ಳಿ ಗ್ರಾಮದ ಸಿದ್ದಪ್ಪನನ್ನು ಅವರ ಚಿಕ್ಕಪ್ಪನ ಮಗನಾದ ಆರೋಪಿ ಬಿಸಲ ರಾಜು ಚಾಕುವಿನಿಂದ ಎರಡು ಬಾರಿ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಿಸಲ ರಾಜು ಮಧ್ಯರಾತ್ರಿ ಮನೆಯ ಮುಂದೆ ಕುಳಿತಿದ್ದ ಸಿದ್ದಪ್ಪ ಸ್ವಾಮಿಯ ಹೊಟ್ಟೆ, ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಲು ತೆರಳುವ ವೇಳೆ ಮಾರ್ಗ ಮಧ್ಯೆ ತೀವ್ರ ರಕ್ತಸ್ರಾವದಿಂದ ಸಿದ್ದಪ್ಪ ಸ್ವಾಮಿ ಕೊನೆಯುಸಿರೆಳೆದಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿ ಬಿಸಲ ರಾಜು ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಬಗ್ಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *