ಮದ್ವೆಯಾದ 15 ದಿನಕ್ಕೇ ವಿವಾಹ ಮಾಡಿಸಿದ್ದ ಪಂಡಿತನ ಜೊತೆ ವಧು ಎಸ್ಕೇಪ್

Public TV
1 Min Read

– ಬೇರೆ ಮದ್ವೆಯನ್ನು ಅರ್ಧಕ್ಕೆ ನಿಲ್ಲಿಸಿ ಪಂಡಿತ ಜೂಟ್
– ಎರಡು ಮಕ್ಕಳ ತಂದೆಯ ಮೇಲೆ ವಧುಗೆ ಲವ್

ಭೋಪಾಲ್: ಮದುವೆಯಾದ 15 ದಿನದಲ್ಲಿಯೇ ನವವಿವಾಹಿತೆಯೊಬ್ಬಳು ವಿವಾಹ ಮಾಡಿಸಿದ್ದ ಪಂಡಿತನ ಜೊತೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಸಿರೋಂಜ್ ನಲ್ಲಿ ನಡೆದಿದೆ.

ಈ ಘಟನೆ ಸಿರೋಜ್‍ನ ಟೋರಿ ಬ್ಯಾಗ್ರೋಡ್ ಪ್ರದೇಶದಲ್ಲಿ ನಡೆದಿದೆ. 21 ವರ್ಷದ ಯುವತಿಯ ಮದುವೆ ಮೇ 7 ರಂದು ನಡೆದಿತ್ತು. ಅದೇ ಗ್ರಾಮದ ಪಂಡಿತ  ವಿನೋದ್ ಮಹಾರಾಜ್ ಯುವತಿಯ ಮದುವೆ ಮಾಡಿಸಿದ್ದನು.

ಮದುವೆಯಾದ ಮೂರನೇ ದಿನಕ್ಕೆ ವಧು ಸಂಪ್ರದಾಯದಂತೆ ತವರು ಮನೆಗೆ ಹಿಂದಿರುಗಿದ್ದಳು. ಮೇ 23ರಂದು ಯುವತಿಯ ಕುಟುಂಬಸ್ಥರು ಮತ್ತೊಂದು ಮದುವೆಯ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಈ ಮದುವೆಯನ್ನು ಸಹ ವಿನೋದ್ ಮಹಾರಾಜ್ ಮುಂದೆ ನಿಂತು ಮಾಡಿಸುತ್ತಿದ್ದನು. ಮಾಂಗಲ್ಯ ಧಾರಣೆ ಮತ್ತು ಸಪ್ತಪದಿಯ ವೇಳೆಗೆ ವಿನೋದ್ ಮಹಾರಾಜ್ ನಾಪತ್ತೆಯಾಗಿದ್ದಾನೆ. ಈ ವೇಳೆ ಆತನನ್ನು ಹುಡುಕಲು ಹೋದಾಗ ನವವಿವಾಹಿತೆಯೊಂದಿಗೆ ಓಡಿಹೋಗಿರುವ ವಿಚಾರ ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ವರನ ಮನೆಯವರು ಯುವತಿಯ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಆಗ ಪಂಡಿತ ವಿನೋದ್ ಮತ್ತು ಯುವತಿ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಈಗಾಗಲೇ ವಿನೋದ್ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಜೊತೆಗೆ ಅಂದಿನ ದಿನವೇ ಪಂಡಿತನ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ವರನ ತಾಯಿ ಮತ್ತು ಸಂಬಂಧಿಕರು, ನಮಗೆ ಮೋಸ ಮಾಡಿ ಪಂಡಿತನ ಜೊತೆ ಓಡಿ ಹೋಗಿದ್ದಾಳೆ. ಜೊತೆಗೆ 1.5 ಲಕ್ಷ ರೂ. ಮೌಲ್ಯದ ಆಭರಣ ಮತ್ತು 30 ಸಾವಿರ ನಗದು ಕದ್ದು ಹೋಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ಯುವತಿ ಮತ್ತು ಪಂಡಿತನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ಇಬ್ಬರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *