ಅರ್ಚಕರ ಕಣ್ಣು ತಪ್ಪಿಸಿ ದೇವಾಲಯದ ಹಣ ಕದ್ದ ಬಾಲಕ!

Public TV
0 Min Read

ಬೆಂಗಳೂರು: ಕೆ.ಆರ್.ಪುರ ಕಟ್ಟೆ ವಿನಾಯಕ ದೇವಾಲಯದಲ್ಲಿ ಅಪರಿಚಿತ ಬಾಲಕ ಅವಿತು ಕುಳಿತು ಅರ್ಚಕರ ಕಣ್ಣು ತಪ್ಪಿಸಿ ಹಣವನ್ನು ಕದ್ದಿರುವ ಘಟನೆ ನಗರದಲ್ಲಿ ನಡೆದಿದೆ.

ಆ.29 ರಂದು ಬೆಳಗ್ಗೆ 10:50 ಸುಮಾರಿನಲ್ಲಿ ಈ ಘಟನೆ ನಡೆದಿದೆ. ಬಾಲಕ ದೇವಾಲಯದ ಹಣವನ್ನು ಅರ್ಚಕರ ಕಣ್ಣು ತಪ್ಪಿಸಿ ಕದ್ದೊಯ್ದಿದ್ದಾನೆ. ಈ ಬಾಲಕ ಹಣವನ್ನು ಕದ್ದು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *