ಕುದಿಯುತ್ತಿರುವ ಸಾಂಬಾರ್‌ ಪಾತ್ರೆಗೆ ಬಿದ್ದು ಬಾಲಕ ಸಾವು

Public TV
1 Min Read

ಲಕ್ನೋ: ಕುದಿಯುತ್ತಿರುವ ಸಾಂಬಾರಿನ (Dal) ಪಾತ್ರೆಯೊಳಗೆ ಬಿದ್ದು ಐದು ವರ್ಷದ ಬಾಲಕನೊಬ್ಬ (Boy) ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶ (Uttar Pradesh) ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಪ್ರದೇಶ ಕರಣ್‍ಪುರದ ಸುತಾರಿ ಗ್ರಾಮದ ನಿವಾಸಿ ಪ್ರಶಾಂತ್(5) ಮೃತ ಬಾಲಕ. ಈತ ತಂದೆ ದುಶೀಲ್ ಸಿಂಗ್. ವೃತ್ತಿಯಲ್ಲಿ ರೈತರಾಗಿದ್ದಾರೆ. ಮುಂಡನ್ ಕಾರ್ಯದ ಅಂಗವಾಗಿ ಅಡುಗೆ ಮಾಡಲಾಗುತ್ತಿತ್ತು. ಆದರೆ ಬಾಲಕ ಪ್ರಶಾಂತ್ ಬಿಸಿ ಪಾತ್ರೆ ಇಡುತ್ತಿದ್ದ ಜಾಗದಲ್ಲಿ ಆಟವಾಡುತ್ತಿದ್ದ. ಆಟವಾಡುತ್ತಾ ಪ್ರಶಾಂತ್ ಜಿಗಿದಿದ್ದಾನೆ. ಈ ವೇಳೆ ಕುದಿಯುತ್ತಿದ್ದ ಸಾಂಬಾರ್ ಪಾತ್ರೆಯೊಳಗೆ ಬಿದ್ದಿದ್ದಾನೆ. ಇದನ್ನೂ ಓದಿ: ಧಮ್, ತಾಕತ್ ಇದ್ರೆ ಉತ್ತರ ಕೊಡಿ – ರಾಜ್ಯಕ್ಕೆ ಆಗಮಿಸುತ್ತಿರುವ ಮೋದಿಗೆ ಕಾಂಗ್ರೆಸ್ ಸರಣಿ ಪ್ರಶ್ನೆ

crime

ಪ್ರಶಾಂತ್‍ನ ಕಿರುಚಾಟ ಕೇಳಿ ಹತ್ತಿರದಲ್ಲಿದ್ದವರು ಬಂದು ಕೂಡಲೇ ಆತನನ್ನು ಮೀರತ್‍ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಈ ಘಟನೆ ಸೈದಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಣ್‍ಪುರ ಸ್ಕುಟಾರಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ

Live Tv 
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *