ಶ್ರೀದೇವಿ ಬಗ್ಗೆ ಮನಬಿಚ್ಚಿ ಟ್ವೀಟ್ ಮಾಡಿದ ಬೋನಿ ಕಪೂರ್

Public TV
2 Min Read

ಮುಂಬೈ: ಬಾಲಿವುಡ್ ನಟಿ ಶ್ರೀದೇವಿಯ ಅಂತ್ಯಕ್ರಿಯೆ ಬುಧವಾರ ಅಯ್ಯಪ್ಪನ್ ಸಂಪ್ರದಾಯದಂತೆ ನೇರವೇರಿತು. ಅಂತಿಮ ವಿಧಿವಿಧಾನ ನಡೆದ ನಂತರ ಬೋನಿ ಕಪೂರ್ ಪತ್ನಿಯ ಬಗ್ಗೆ ಮನಬಿಚ್ಚಿ ಟ್ವೀಟ್ ಮಾಡಿದ್ದಾರೆ. ಸ್ನೇಹಿತೆ, ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳ ತಾಯಿಯನ್ನು ಕಳೆದುಕೊಳ್ಳುವುದನ್ನು ಮಾತಿನಲ್ಲಿ ಹೇಳಲು ಅಸಾಧ್ಯ ಎಂದು ಹೇಳಿದ್ದಾರೆ.

ಮೊದಲಿಗೆ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಮತ್ತು ಶ್ರೀದೇವಿಯ ಅಸಂಖ್ಯಾತ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ, ಜಾಹ್ನವಿ ಹಾಗೂ ಖುಷಿಗೆ ಅರ್ಜುನ್ ಕಪೂರ್ ಹಾಗೂ ಅನ್ಶುಲಾ ಬೆಂಬಲಿಕ್ಕೆ ನಿಂತಿದ್ದರು. ನಮ್ಮ ಇಡೀ ಕುಟುಂಬಕ್ಕೆ ಇದು ಒಂದು ದೊಡ್ಡ ನಷ್ಟ ಎಂದು ಬೋನಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಶ್ರೀದೇವಿ ಹೊರಪ್ರಪಂಚಕ್ಕೆ ಚಾಂದಿನಿ ಆಗಿದ್ದಳು. ಆದರೆ ಅವಳು ನನಗೆ ನನ್ನ ಪ್ರೀತಿ, ನನ್ನ ಸ್ನೇಹಿತೆ, ನನ್ನ ಜೊತೆಗಾರ್ತಿಯಾಗಿದ್ದಳು. ಅಷ್ಟೇ ಅಲ್ಲದೇ ನನ್ನ ಇಬ್ಬರು ಹೆಣ್ಣುಮಕ್ಕಳಿಗೆ ತಾಯಿಯಾಗಿ, ಅವಳೇ ಎಲ್ಲವೂ ಆಗಿದ್ದಳು ಎಂದು ಹೇಳಿಕೊಂಡಿದ್ದಾರೆ.

ನನ್ನ ಪತ್ನಿ, ಜಾಹ್ನವಿ ಹಾಗೂ ಖುಷಿ ತಾಯಿಗೆ ನಾನು ಅಂತಿಮ ನಮನ ಸಲ್ಲಿಸುತ್ತಾ ಅಭಿಮಾನಿಗಳ ಹತ್ತಿರ ನಾನು ಒಂದು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ನೋವನ್ನು ಖಾಸಗಿಯಾಗಿ ಇರಲು ಬಿಡಿ. ನಿಮಗೆ ಶ್ರೀದೇವಿ ಬಗ್ಗೆ ಮಾತನಾಡಬೇಕು ಎಂದರೆ ಅದು ಹಾಗೇ ಒಂದು ಸಿಹಿ ನೆನಪಾಗಿ ಉಳಿಯಲಿ ಎಂದು ಹೇಳಿದ್ದಾರೆ.

ಶ್ರೀದೇವಿ ನಟಿಯಾಗಿದ್ದು, ಆಕೆಯ ಜಾಗವನ್ನು ಯಾರೂ ತುಂಬಾಲಾರರು. ನನ್ನ ಕಡೆಯಿಂದ ಆಕೆಗೆ ಪ್ರೀತಿ ಹಾಗೂ ಗೌರವ ಸಲ್ಲಿಸುತ್ತೇನೆ. ತಾರೆಯ ಮೇಲೆ ಎಂದಿಗೂ ಕರ್ಟನ್ ಬೀಳುವುದಿಲ್ಲ. ಅವರು ಚಿತ್ರರಂಗದಲ್ಲಿ ಯಾವಾಗಲೂ ಶೈನ್ ಆಗುತ್ತಿರುತ್ತಾರೆ ಎಂದು ಬೋನಿ ತಿಳಿಸಿದ್ದಾರೆ.

 

ನನ್ನ ಇಬ್ಬರೂ ಮಕ್ಕಳು ಶ್ರೀದೇವಿ ಇಲ್ಲದೇ ಹೇಗೆ ಇರುತ್ತಾರೆಂಬುದು ನನಗೆ ಚಿಂತೆಯಾಗಿದೆ. ಆಕೆ ನಮ್ಮ ಜೀವನವಾಗಿದ್ದಳು ಹಾಗೂ ನಮಗೆ ಧೈರ್ಯವಾಗಿದ್ದಳು. ನಮ್ಮ ನಗುವಿನ ಕಾರಣ ಶ್ರೀದೇವಿ ಆಗಿದ್ದಳು. ಮೈ ಲವ್, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಜೀವನ ಈಗ ಮೊದಲಿನಂತೆ ಆಗುವುದಿಲ್ಲ ಎಂದು ಬೋನಿ ಕಪೂರ್ ಟ್ವಿಟ್ಟರಿನಲ್ಲಿ ಶ್ರೀದೇವಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ: ಬೋನಿ ಕಪೂರ್ ತಾಯಿ ಶ್ರೀದೇವಿಯ ಹೊಟ್ಟೆಗೆ ಗುದ್ದಿದ್ದರು- ರಾಮ್ ಗೋಪಾಲ್ ವರ್ಮಾ

Share This Article
Leave a Comment

Leave a Reply

Your email address will not be published. Required fields are marked *