ಆಪರೇಷನ್ ಸಿಂಧೂರ: ಪಾಕ್‌ಗೆ ತಕ್ಕ ಪಾಠ ಕಲಿಸಿದ ಭಾರತಕ್ಕೆ ಜೈ ಎಂದ ಬಾಲಿವುಡ್

Public TV
1 Min Read

ಡರಾತ್ರಿ ಪಾಕಿಸ್ತಾನದಲ್ಲಿರುವ ಉಗ್ರರ 9 ಅಡುಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಭಾರತ ತಕ್ಕ ಪಾಠ ಕಲಿಸಿದೆ. ಈ ಹಿನ್ನೆಲೆ ಬಾಲಿವುಡ್ ಮಂದಿ ಅನುಪಮ್ ಖೇರ್, ರಿತೇಶ್ ಸೇರಿದಂತೆ ಅನೇಕರು ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಚರಣೆಯನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ:9 ಉಗ್ರರ ನೆಲೆಗಳು ಉಡೀಸ್‌- ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?

ಭಾರತ್ ಮಾತಾ ಕಿ ಜೈ ಆಪರೇಷನ್ ಸಿಂಧೂರ ಎಂದು ಅನುಪಮ್ ಖೇರ್ (Anupam Kher) ಸೋಷಿಯ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:Operation Sindoor | 23 ನಿಮಿಷದ ದಾಳಿಗೆ 80ಕ್ಕೂ ಹೆಚ್ಚು ಉಗ್ರರು ಮಟ್ಯಾಶ್‌

ಜೈ ಹಿಂದ್ ಸೇನಾ, ಭಾರತ್ ಮಾತಾ ಕಿ ಜೈ ಎಂದು ನಟ ರಿತೇಶ್ ದೇಶ್‌ಮುಖ್ ಬರೆದಿದ್ದಾರೆ.

ನಿಮ್ರತ್ ಕೌರ್ ಎಕ್ಸ್‌ನಲ್ಲಿ, ನಮ್ಮ ಪಡೆಗಳೊಂದಿಗೆ ಒಗ್ಗೂಡಿ. ಒಂದು ದೇಶ. ಒಂದು ಮಿಷನ್. ಜೈಹಿಂದ್, ಆಪರೇಷನ್ ಸಿಂಧೂರ್. ಜೈ ಹಿಂದ್ ಕಿ ಸೇನಾ ಎಂದು ಬರೆದುಕೊಂಡಿದ್ದಾರೆ.


ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಇದೀಗ ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

Share This Article