ಬಾಲಿವುಡ್ ನಟಿ ಪೂಜಾ ಹೆಗ್ಡೆ ಉಡುಪಿಗೆ- ಮದುವೆ ಬಗ್ಗೆ ಮಾತನಾಡಿದ್ರೆ ಮಾರುದ್ದ ಓಡಿದ್ರು

Public TV
1 Min Read

– ಕಾಪು ಮಾರಿಯಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ

ಉಡುಪಿ: ಬಾಲಿವುಡ್ ನಟಿ ಪೂಜಾ ಹೆಗ್ಡೆ ಉಡುಪಿಗೆ ಆಗಮಿಸಿದ್ದರು. ತನ್ನ ಕುಟುಂಬದ ಮನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವುದರಿಂದ ಪೂಜಾ ಜಿಲ್ಲೆಗೆ ಆಗಮಿಸಿದ್ದರು. ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇವರ ಜೊತೆ ಕುಟುಂಬಸ್ಥರೂ ಇದ್ದರು.

ಬಾಲಿವುಡ್‍ನ ಹೃತಿಕ್ ರೋಷನ್ ಅಭಿನಯದ ಮೊಹೆಂಜೋದಾರೋ ಮತ್ತು ಟಾಲಿವುಡ್‍ನ ಅಲ್ಲು ಅರ್ಜುನ್ ಅಭಿನಯದ ದುವ್ವಾಡ ಜಗನ್ನಾಥಮ್ ಚಿತ್ರದಲ್ಲಿ ಪೂಜಾ ಹೆಗ್ಡೆ ಅಭಿನಯಿಸಿದ್ದು, ಎರಡೂ ಚಿತ್ರಗಳು ಒಳ್ಳೆ ಹೆಸರು ಮಾಡಿವೆ.

ಒಂದು ತೆಲುಗು ಚಿತ್ರ ಕೈಯ್ಯಲ್ಲಿದ್ದು, ಹಿಂದಿಯ ಮೂರು ಸ್ಕ್ರಿಪ್ಟ್‍ಗಳನ್ನು ಓದುತ್ತಿದ್ದೇನೆ. ಇಷ್ಟವಾದರೆ ಅದಕ್ಕೆ ಸಹಿ ಮಾಡುತ್ತೇನೆ ಎಂದು ಹೇಳಿರುವ ಪೂಜಾ, ಮದುವೆ ಸುದ್ದಿ ತೆಗೆದ ಕೂಡಲೇ ಮಾರು ದೂರ ಓಡಿದರು. ಮದುವೆ ಬಗ್ಗೆ ಮಾತನಾಡಲು ನಾನು ಇನ್ನೂ ಚಿಕ್ಕವಳು. ನನ್ನ ಮುಂದೆ ದೊಡ್ಡ ದೊಡ್ಡ ಕನಸಿದೆ. ಚಿತ್ರರಂಗದಲ್ಲಿ ಹೆಸರು ಮಾಡಿದ ನಂತರ ಆ ಬಗ್ಗೆ ಯೋಚನೆ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.

ಕನ್ನಡದಲ್ಲಿ ನಟಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಒಳ್ಳೆಯ ಡೈರೆಕ್ಟರ್ ಮತ್ತು ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಸ್ಯಾಂಡಲ್‍ವುಡ್‍ನಲ್ಲಿಯೂ ನಟಿಸೋಕೆ ರೆಡಿ ಎಂದರು. ಟಾಲಿವುಡ್ ಚಿತ್ರದಲ್ಲಿ ಬ್ಯುಸಿ ಇರುವ ಪೂಜಾ ಹೆಗ್ಡೆ, ಒಂದು ದಿನದ ಮಟ್ಟಿಗೆ ಉಡುಪಿಗೆ ಆಗಮಿಸಿದ್ದರು.

ಸಾರ್ವಜನಿಕ ಗಣೇಶೋತ್ಸವ ಹಾಗೂ ಸಂಬಂಧಿಕರ ಮನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪೂಜಾ ಫುಲ್ ಖುಷಿಯಾಗಿದ್ದರು. ಕಾಪು ಮಾರಿಯಮ್ಮ ದೇವಸ್ಥಾನ ಸಮೀಪದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾಪುವಿನಲ್ಲಿದ್ದ ವೇಷಗಳೆಲ್ಲಾ ನಟಿ ಪೂಜಾ ಹೆಗ್ಡೆ ಅವರಿಗೆ ಮುತ್ತಿಗೆ ಹಾಕಿದವು. ಹಬ್ಬದ ಖುಷಿಗೆ ಹಣ ಕೊಡಲು ಬೇಡಿಕೆಯಿಟ್ಟರು. ನಟಿ ಪೂಜಾ ತಂದೆಯ ಪರ್ಸಿಂದ ಬಂದ ಎಲ್ಲಾ ವೇಷಧಾರಿಗಳಿಗೆ ಹಣ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *