ಅವಘಡಕ್ಕೂ ಮುನ್ನ ಎದ್ದೇಳಿ – ಹೈದರಾಬಾದ್ ಏರ್ ಪೋರ್ಟ್ ವಿರುದ್ಧ ರಿತೇಶ್ ಆಕ್ರೋಶ

Public TV
1 Min Read

ಮುಂಬೈ: ಬಾಲಿವುಡ್ ನಟ ರಿತೇಶ್ ದೇಶಮುಖ್ ಹೈದರಾಬಾದ್ ಏರ್ ಪೋರ್ಟ್ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿ ಅವಘಡಕ್ಕೂ ಮುನ್ನ ಎದ್ದೇಳಿ ಎಂದು ಟ್ವೀಟ್ ಮಾಡಿದ್ದಾರೆ.

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಾಂಜ್ ನ ಎಮೆರ್ಜಿನ್ಸಿ ಗೇಟ್ ಲಾಕ್ ಆಗಿರುವ ವಿಡಿಯೋವನ್ನು ರಿತೇಶ್ ದೇಶಮುಖ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ. ಏರ್ ಪೋರ್ಟ್ ನಲ್ಲಿ ವೇಟಿಂಗ್ ಲಾಂಜ್ ಕೋಣೆಗೆ ಪ್ರವೇಶಿಲು ಮತ್ತು ನಿರ್ಗಮಿಸಲು ಎಲಿವೇಟರ್ ಒಂದೇ ಮಾರ್ಗವಾಗಿದೆ. ಪಕ್ಕದಲ್ಲಿರುವ ಎಮರ್ಜಿನ್ಸಿ ಗೇಟ್‍ಗೆ ಚೈನ್ ನಿಂದ ಲಾಕ್ ಮಾಡಲಾಗಿದೆ.

ಟ್ವೀಟ್ ನಲ್ಲಿ ಏನಿದೆ?
ನಾನು ಇದೀಗ ಹೈದರಾಬಾದ್ ಏರ್ ಪೋರ್ಟ್ ನ ವೇಟಿಂಗ್ ಲಾಂಜ್ ನಲ್ಲಿದ್ದೇನೆ. ಈ ನಿರೀಕ್ಷಣಾ ಕೊಠಡಿಗೆ ತೆರಳಲು ಮತ್ತು ನಿರ್ಗಮಿಸಲು ಒಂದೇ ಎಲಿವೇಟರ್ ಇದೆ. ದಿಢೀರ್ ಅಂತಾ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇರುವ ಒಂದು ಮಾರ್ಗ ಬಂದ್ ಆಗಿತ್ತು. ಎಮರ್ಜಿನ್ಸಿ ಗೇಟ್‍ನ್ನು ಚೈನ್ ನಿಂದ ಲಾಕ್ ಮಾಡಲಾಗಿದೆ. ಒಂದು ವೇಳೆ ಬೆಂಕಿ ಅವಘಡ ಸಂಭವಿಸಿದ್ರೆ ಮುಂದೆ ನಡೆಯುವ ಅನಾಹುತಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ನಿರೀಕ್ಷಣಾ ಕೊಠಡಿಯ ಎಲಿವೇಟರ್ ನಿಂತಿದ್ದರಿಂದ ಪ್ರಯಾಣಿಕರು ತುರ್ತು ನಿರ್ಗಮನದ ಬಾಗಿಲು ತೆರೆಯುವಂತೆ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ವಿಮಾನ ಟೇಕ್ ಆಫ್ ಆಗುತ್ತಿದ್ದು, ಡೋರ್ ತೆರೆಯಿರಿ ಎಂದರೂ ಸಿಬ್ಬಂದಿ ಬಾಗಿಲು ತೆಗೆದಿಲ್ಲ. ಎಮರ್ಜಿನ್ಸಿ ವೇಳೆಯಲ್ಲಿ ಬಾಗಿಲು ತೆಗೆಯದೇ ಇದ್ದರೆ ಹೇಗೆ? ಅನಾಹುತಕ್ಕೂ ಮುನ್ನ ಹೈದರಾಬಾದ್ ಏರ್ ಪೋರ್ಟ್ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

ರಿತೇಶ್ ಟ್ವೀಟಿಗೆ ಪ್ರತಿಕ್ರಿಯಿಸಿರುವ ಏರ್ ಪೋರ್ಟ್, ಸೇವೆಯಲ್ಲಿ ತೊಂದರೆಯಾಗಿದ್ದಕ್ಕೆ ವಿಷಾದಿಸುತ್ತೇವೆ. ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲವೇ ಕ್ಷಣಗಳಲ್ಲಿ ಸಮಸ್ಯೆಯನ್ನ ಪರಿಹರಿಸಲಾಗಿದೆ. ನಮ್ಮ ಏರ್ ಪೋರ್ಟ್ ಟರ್ಮಿನಲ್ ಗಳು ಸುರಕ್ಷತೆಗೆ ಅನುಗುಣವಾಗಿರುತ್ತವೆ. ಒಂದು ವೇಳೆ ತುರ್ತು ಸಮಯದಲ್ಲಿ ಪ್ರಯಾಣಿಕರು ಗ್ಲಾಸ್ ಒಡೆದು ಹೊರಗೆ ಬರಬಹುದು. ನಾವು ಪ್ರಯಾಣಿಕರ ಸುರಕ್ಷತೆಗೆ ಮೊದಲ ಅದ್ಯತೆಯನ್ನು ನೀಡುತ್ತೇವೆ ಎಂದು ಟ್ವೀಟ್ ಮಾಡಿ ಉತ್ತರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *